ದತ್ತಿದಾನಿ ಕೆ. ಮೋಹನ್ ದೇವ ಆಳ್ವ ಮಾತನಾಡಿ, ‘ಶಾಸ್ತ್ರೀಯ ಸಂಗೀತಕ್ಕೆ ಜಾನಪದವೇ ಮೂಲಬೇರು. ಬಾಲ್ಯದಿಂದಲೇ ಸಂಗೀತದ ಜೊತೆಗೆ ಅವಿನಾಭಾವ ಸಂಬಂಧವನ್ನು ನಾನು ಹೊಂದಿದ್ದೆ. ಹಾಗಾಗಿ, ಸಂಗೀತಕ್ಕೆ ಸಂಬಂಧಿಸಿದ ದತ್ತಿನಿಧಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು, ಗಾಯನ ಸಮಾಜ ಸೇರಿದಂತೆ ವಿವಿಧೆಡೆ ಸ್ಥಾಪಿಸಿದ್ದೇನೆ.ಬಿ.ಕೆ. ಸುಮಿತ್ರಾ ಮತ್ತು ಟಿ.ಎನ್. ಪದ್ಮಾ ಅವರು ಇದುವರೆಗೂ ಯಾವ ಪ್ರಶಸ್ತಿಗಾಗಿಯು ಸರ್ಕಾರದ ಅಥವಾ ಸಾಂಸ್ಕೃತಿಕ ಸಂಸ್ಥೆಗಳ ಕದ ಬಡಿದಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.