ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರ ಕಚೇರಿಗೆ ಆಗಮಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ವಿಮ್ಸ್ ವೈದ್ಯಕೀಯ ಅಧೀಕ್ಷಕ ಯೋಗೇಶ್, ಟ್ರಾಮಾ ಕೇರ್ ಅಧೀಕ್ಷಕ ಶಿವು ನಾಯಕ್, ಆರ್ಎಂಒ ಖಾಜಾ ಮೊಹಿದ್ದೀನ್, ನರ್ಸಿಂಗ್ ಸೂಪರಿಂಟೆಂಡೆಂಟ್ ನಾಗರತ್ನ, ಮೆಡಿಸಿನ್ ವಿಭಾಗದ ಡಾ. ಮಲ್ಲಿಕಾರ್ಜುನರೆಡ್ಡಿ ಸೇರಿ ವಿವಿಧ ವೈದ್ಯಾಧಿಕಾರಿಗಳ ವಿಚಾರಣೆ ನಡೆಸಿದರು.