‘ಈ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ಸದ್ಭವ್ ಬೆಂಗಳೂರು ಹೈವೇ ಪ್ರೈವೇಟ್ ಕಂಪನಿ ವಹಿಸಿಕೊಂಡಿದ್ದು, ಕಂಪನಿ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಮತ್ತು ಮೂಲಸೌಲಭ್ಯಗಳ ಸ್ಥಳಾಂತರ ವಿಳಂಬ ಆಗಿದ್ದರಿಂದ ಇಡೀ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಈ ಯೋಜನೆಯ ಮೇಲೆ ನಿಗಾ ಇಟ್ಟಿದ್ದು, ಹಣದ ಹರಿವಿನ ಬಗ್ಗೆಯೂ ಕ್ರಮ ವಹಿಸಲಿದೆ’ ಎಂದು ಸಿಂಧ್ಯ ಅವರಿಗೆ ಬರೆದ ಪತ್ರದಲ್ಲಿ ಗಡ್ಕರಿ ತಿಳಿಸಿದ್ದಾರೆ.