<p><strong>ಬೆಂಗಳೂರು</strong>: ‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹಲವು ಅಕ್ರಮಗಳು ನಡೆದಿವೆ‘ ಎಂಬ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.</p>.<p>ಈ ನಿಟ್ಟಿನಲ್ಲಿ ಈಗಾಗಲೇ ತ್ರಿಸದಸ್ಯ ತಂಡವನ್ನೂ ರಚಿಸಲಾಗಿದ್ದು, ನಾಲ್ಕು ದಿನಗಳೊಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.</p>.<p>ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ ಆರತಿ ಆನಂದ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ವೆಂಕಟೇಶಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆಯ ಲೆಕ್ಕಾಧಿಕಾರಿ ಮಹೇಶ್ ಅವರನ್ನು ಒಳಗೊಂಡ ತನಿಖಾ ತಂಡವನ್ನು ಸರ್ಕಾರ ರಚಿಸಿದೆ.</p>.<p>ವಿವಿ ಅಪಹಾಸ್ಯಕ್ಕೆ ಈಡಾಗಿದೆ: ಕುಲಪತಿ ಮತ್ತು ಕುಲಸಚಿವರ ನಡುವಿನ ಶೀತಲಸಮರ, ವಿತ್ತಾಧಿಕಾರಿಯನ್ನು ನಿಯಮಬಾಹಿರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಬೋಧಕೇತರ ಸಿಬ್ಬಂದಿಯ ಪ್ರತಿಭಟನೆಗೆ ಪ್ರಚೋದನೆ ಮತ್ತಿತರ ಅಂಶಗಳು ತನಿಖಾ ವ್ಯಾಪ್ತಿಯಲ್ಲಿವೆ.</p>.<p>'ವಿಶ್ವವಿದ್ಯಾಲಯದಲ್ಲಿನ ಆಡಳಿತಾ<br />ತ್ಮಕ ಜಡತ್ವವನ್ನು ಹೋಗಲಾಡಿಸಿ, ಅವ್ಯವಸ್ಥೆಯನ್ನು ಸರಿಪಡಿಸಿ, ಆರ್ಥಿಕ ಶಿಸ್ತನ್ನು ಸರಿಪಡಿಸುವ ಉದ್ದೇಶದಿಂದ ಈ ವಿಶೇಷ ತಂಡ ರಚಿಸಲಾಗಿದೆ' ಎಂದು ಸರ್ಕಾರ ಹೇಳಿದೆ.</p>.<p>'ಆರ್ಥಿಕ ವ್ಯವಹಾರದಲ್ಲಿ ನಡೆದ ಗಂಭೀರ ಪ್ರಮಾದಗಳಿಂದ ವಿಶ್ವವಿದ್ಯಾಲಯವು ಸಾರ್ವಜನಿಕ ಮತ್ತು ಮಾಧ್ಯಮಗಳ ದೃಷ್ಟಿಯಲ್ಲಿ ಅಪಹಾಸ್ಯಕ್ಕೆ ಈಡಾಗುವಂತಾಗಿದೆ' ಎಂದೂ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.</p>.<p>ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ತಂಡವು ಎಲ್ಲ ಕಾರ್ಯಗಳ ಪರಿವೀಕ್ಷಣೆ ನಡೆಸಲು ಅವಕಾಶ ನೀಡುವಂತೆಯೂ ಕುಲಪತಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.</p>.<p>ಈ ಕುರಿತು ಪ್ರತಿಕ್ರಿಯೆಗಾಗಿ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.</p>.<p>ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ತಿದ್ದಿದ ಹಗರಣ, ಕುಲಪತಿ- ಕುಲಸಚಿವರ ನಡುವಿನ ಶೀತಲ ಸಮರ, ಲೆಕ್ಕಪತ್ರಗಳಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ವಿತ್ತಾಧಿಕಾರಿ ನೀಡಿದ ವರದಿ, ಬೋಧಕೇ<br />ತರ ಸಿಬ್ಬಂದಿ ಮುಷ್ಕರದ ಹಿಂದಿರುವ ಪ್ರಚೋದನೆ ಇತ್ಯಾದಿ ಅಂಶಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದನ್ನು ಸ್ಮರಿಸಬಹುದು.</p>.<p class="Briefhead">ತನಿಖೆ ನಡೆಸಲು ಸೂಚಿಸಿರುವ ಅಂಶಗಳು</p>.<p>* ಬೋಧಕ ಹಾಗೂ ಬೋಧಕೇತರ ನೌಕರರ ಮುಂಬಡ್ತಿ ಪ್ರಕ್ರಿಯೆಗಳಲ್ಲಿ ಲೋಪಗಳನ್ನು ಎಸಗಿರುವ ಹಾಗೂ ನಿಯಮ ಉಲ್ಲಂಘಿಸಿರುವ ಬಗ್ಗೆ</p>.<p>* ಹಣಕಾಸು ಅಧಿಕಾರಿಯು ವಿಶ್ವವಿದ್ಯಾಲಯ ಲೆಕ್ಕಪತ್ರಗಳ ನಿರ್ವಹಣೆ/ಹಣಕಾಸು ವಹಿವಾಟುಗಳಲ್ಲಿನ ಲೋಪದೋಷಗಳ ಕುರಿತಂತೆ ವ್ಯಕ್ತಪಡಿಸಿರುವ ಆಕ್ಷೇಪಣೆ</p>.<p>* ವಿಶ್ವವಿದ್ಯಾಲಯದ ಕುಲಪತಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ ವಿರುದ್ಧವಾಗಿ ಉಲ್ಲಂಘನೆ ಮಾಡಿರುವ ಹಾಗೂ ಸಿಂಡಿಕೇಟ್ ಸಭೆಗಳನ್ನು ನಿಯಮಿತವಾಗಿ ನಡೆಸದ ಬಗ್ಗೆ</p>.<p>*ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಕುರಿತು</p>.<p>* ವಿಶ್ವವಿದ್ಯಾಲಯದ 50 ವಿಭಾಗಗಳಿಗೆ ಅಧ್ಯಕ್ಷರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿರುವ ಬಗ್ಗೆ</p>.<p>* ಘಟಿಕೋತ್ಸವವನ್ನು ಸರಿಯಾದ ಸಮಯಕ್ಕೆ ನಡೆಸದಿರುವ ಬಗ್ಗೆ</p>.<p>* ಕುಲಸಚಿವರು ಹಾಗೂ ವಿತ್ತಾಧಿಕಾರಿಗಳು ಸಿಬ್ಬಂದಿಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದಿರುವ ಕುರಿತು</p>.<p>* ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ</p>.<p class="Briefhead">ಉತ್ತರ ಪತ್ರಿಕೆಗಳ ಹಗರಣ: ಚುರುಕಾಗದ ತನಿಖೆ</p>.<p>ಗುತ್ತಿಗೆ ಪಡೆದ ಏಜೆನ್ಸಿಯೇ ಉತ್ತರ ಪತ್ರಿಕೆಗಳನ್ನು ತಿದ್ದಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿಲ್ಲ. ಪೊಲೀಸ್ ಠಾಣಾ ವ್ಯಾಪ್ತಿ ಮೀರಿದ ಈ ಪ್ರಕರಣವನ್ನು ಉನ್ನತ ತನಿಖಾ ತಂಡಕ್ಕೆ ವಹಿಸಬೇಕಿತ್ತು. ಆ ಕೆಲಸವೂ ಆಗಿಲ್ಲ.</p>.<p>'ವಿಶ್ವವಿದ್ಯಾಲಯದಿಂದ ಎಲ್ಲ ಪ್ರಕ್ರಿಯೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಅಡ್ವೊಕೇಟ್ ಜನರಲ್ ಅವರು ಪರಿಶೀಲನೆ ನಡೆಸುವ ಸಾಧ್ಯತೆ ಇದೆ' ಎಂದು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದರು.</p>.<p class="Briefhead">ತನಿಖಾ ತಂಡ ಪುನರ್ ರಚನೆ ?</p>.<p>ತನಿಖಾ ತಂಡದಲ್ಲಿರುವ ಅಧಿಕಾರಿಗಳು ಕುಲಸಚಿವರು ಮತ್ತು ಕೆಎಎಸ್ ದರ್ಜೆಯವರು. ಕುಲಪತಿ ವಿರುದ್ಧ ಮತ್ತು ಐಎಎಸ್ ಅಧಿಕಾರಿಯಾಗಿರುವ ಕೆ. ಜ್ಯೋತಿ ಅವರ ವಿಚಾರಣೆ ನಡೆಸಬೇಕಾಗುತ್ತದೆ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯೂ ಆಗಲಿದೆ.</p>.<p>ಜ.29ರಂದೇ ತಂಡವನ್ನು ರಚಿಸಲಾಗಿದೆ. ನಾಲ್ಕು ದಿನದೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ. ಆದರೆ, ಶಿಷ್ಟಾಚಾರದ ಉಲ್ಲಂಘನೆ ಆಗುತ್ತದೆ ಎಂಬ ಕಾರಣದಿಂದ ತಂಡವು ಇನ್ನೂ ತನಿಖೆ ಆರಂಭಿಸಿಲ್ಲ. ತನಿಖಾ ತಂಡವನ್ನು ಪುನರ್ರಚಿಸಿ, ಐಎಎಸ್ ಮಟ್ಟದ ಅಧಿಕಾರಿಗೆ ತನಿಖೆಯ ನೇತೃತ್ವ ವಹಿಸುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹಲವು ಅಕ್ರಮಗಳು ನಡೆದಿವೆ‘ ಎಂಬ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.</p>.<p>ಈ ನಿಟ್ಟಿನಲ್ಲಿ ಈಗಾಗಲೇ ತ್ರಿಸದಸ್ಯ ತಂಡವನ್ನೂ ರಚಿಸಲಾಗಿದ್ದು, ನಾಲ್ಕು ದಿನಗಳೊಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.</p>.<p>ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವರಾದ ಆರತಿ ಆನಂದ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾದ ವೆಂಕಟೇಶಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆಯ ಲೆಕ್ಕಾಧಿಕಾರಿ ಮಹೇಶ್ ಅವರನ್ನು ಒಳಗೊಂಡ ತನಿಖಾ ತಂಡವನ್ನು ಸರ್ಕಾರ ರಚಿಸಿದೆ.</p>.<p>ವಿವಿ ಅಪಹಾಸ್ಯಕ್ಕೆ ಈಡಾಗಿದೆ: ಕುಲಪತಿ ಮತ್ತು ಕುಲಸಚಿವರ ನಡುವಿನ ಶೀತಲಸಮರ, ವಿತ್ತಾಧಿಕಾರಿಯನ್ನು ನಿಯಮಬಾಹಿರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಬೋಧಕೇತರ ಸಿಬ್ಬಂದಿಯ ಪ್ರತಿಭಟನೆಗೆ ಪ್ರಚೋದನೆ ಮತ್ತಿತರ ಅಂಶಗಳು ತನಿಖಾ ವ್ಯಾಪ್ತಿಯಲ್ಲಿವೆ.</p>.<p>'ವಿಶ್ವವಿದ್ಯಾಲಯದಲ್ಲಿನ ಆಡಳಿತಾ<br />ತ್ಮಕ ಜಡತ್ವವನ್ನು ಹೋಗಲಾಡಿಸಿ, ಅವ್ಯವಸ್ಥೆಯನ್ನು ಸರಿಪಡಿಸಿ, ಆರ್ಥಿಕ ಶಿಸ್ತನ್ನು ಸರಿಪಡಿಸುವ ಉದ್ದೇಶದಿಂದ ಈ ವಿಶೇಷ ತಂಡ ರಚಿಸಲಾಗಿದೆ' ಎಂದು ಸರ್ಕಾರ ಹೇಳಿದೆ.</p>.<p>'ಆರ್ಥಿಕ ವ್ಯವಹಾರದಲ್ಲಿ ನಡೆದ ಗಂಭೀರ ಪ್ರಮಾದಗಳಿಂದ ವಿಶ್ವವಿದ್ಯಾಲಯವು ಸಾರ್ವಜನಿಕ ಮತ್ತು ಮಾಧ್ಯಮಗಳ ದೃಷ್ಟಿಯಲ್ಲಿ ಅಪಹಾಸ್ಯಕ್ಕೆ ಈಡಾಗುವಂತಾಗಿದೆ' ಎಂದೂ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.</p>.<p>ತನಿಖಾ ತಂಡಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಹಾಗೂ ತಂಡವು ಎಲ್ಲ ಕಾರ್ಯಗಳ ಪರಿವೀಕ್ಷಣೆ ನಡೆಸಲು ಅವಕಾಶ ನೀಡುವಂತೆಯೂ ಕುಲಪತಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.</p>.<p>ಈ ಕುರಿತು ಪ್ರತಿಕ್ರಿಯೆಗಾಗಿ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.</p>.<p>ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ತಿದ್ದಿದ ಹಗರಣ, ಕುಲಪತಿ- ಕುಲಸಚಿವರ ನಡುವಿನ ಶೀತಲ ಸಮರ, ಲೆಕ್ಕಪತ್ರಗಳಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ವಿತ್ತಾಧಿಕಾರಿ ನೀಡಿದ ವರದಿ, ಬೋಧಕೇ<br />ತರ ಸಿಬ್ಬಂದಿ ಮುಷ್ಕರದ ಹಿಂದಿರುವ ಪ್ರಚೋದನೆ ಇತ್ಯಾದಿ ಅಂಶಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದನ್ನು ಸ್ಮರಿಸಬಹುದು.</p>.<p class="Briefhead">ತನಿಖೆ ನಡೆಸಲು ಸೂಚಿಸಿರುವ ಅಂಶಗಳು</p>.<p>* ಬೋಧಕ ಹಾಗೂ ಬೋಧಕೇತರ ನೌಕರರ ಮುಂಬಡ್ತಿ ಪ್ರಕ್ರಿಯೆಗಳಲ್ಲಿ ಲೋಪಗಳನ್ನು ಎಸಗಿರುವ ಹಾಗೂ ನಿಯಮ ಉಲ್ಲಂಘಿಸಿರುವ ಬಗ್ಗೆ</p>.<p>* ಹಣಕಾಸು ಅಧಿಕಾರಿಯು ವಿಶ್ವವಿದ್ಯಾಲಯ ಲೆಕ್ಕಪತ್ರಗಳ ನಿರ್ವಹಣೆ/ಹಣಕಾಸು ವಹಿವಾಟುಗಳಲ್ಲಿನ ಲೋಪದೋಷಗಳ ಕುರಿತಂತೆ ವ್ಯಕ್ತಪಡಿಸಿರುವ ಆಕ್ಷೇಪಣೆ</p>.<p>* ವಿಶ್ವವಿದ್ಯಾಲಯದ ಕುಲಪತಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ ವಿರುದ್ಧವಾಗಿ ಉಲ್ಲಂಘನೆ ಮಾಡಿರುವ ಹಾಗೂ ಸಿಂಡಿಕೇಟ್ ಸಭೆಗಳನ್ನು ನಿಯಮಿತವಾಗಿ ನಡೆಸದ ಬಗ್ಗೆ</p>.<p>*ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಕುರಿತು</p>.<p>* ವಿಶ್ವವಿದ್ಯಾಲಯದ 50 ವಿಭಾಗಗಳಿಗೆ ಅಧ್ಯಕ್ಷರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿರುವ ಬಗ್ಗೆ</p>.<p>* ಘಟಿಕೋತ್ಸವವನ್ನು ಸರಿಯಾದ ಸಮಯಕ್ಕೆ ನಡೆಸದಿರುವ ಬಗ್ಗೆ</p>.<p>* ಕುಲಸಚಿವರು ಹಾಗೂ ವಿತ್ತಾಧಿಕಾರಿಗಳು ಸಿಬ್ಬಂದಿಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದಿರುವ ಕುರಿತು</p>.<p>* ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ</p>.<p class="Briefhead">ಉತ್ತರ ಪತ್ರಿಕೆಗಳ ಹಗರಣ: ಚುರುಕಾಗದ ತನಿಖೆ</p>.<p>ಗುತ್ತಿಗೆ ಪಡೆದ ಏಜೆನ್ಸಿಯೇ ಉತ್ತರ ಪತ್ರಿಕೆಗಳನ್ನು ತಿದ್ದಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿಲ್ಲ. ಪೊಲೀಸ್ ಠಾಣಾ ವ್ಯಾಪ್ತಿ ಮೀರಿದ ಈ ಪ್ರಕರಣವನ್ನು ಉನ್ನತ ತನಿಖಾ ತಂಡಕ್ಕೆ ವಹಿಸಬೇಕಿತ್ತು. ಆ ಕೆಲಸವೂ ಆಗಿಲ್ಲ.</p>.<p>'ವಿಶ್ವವಿದ್ಯಾಲಯದಿಂದ ಎಲ್ಲ ಪ್ರಕ್ರಿಯೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಅಡ್ವೊಕೇಟ್ ಜನರಲ್ ಅವರು ಪರಿಶೀಲನೆ ನಡೆಸುವ ಸಾಧ್ಯತೆ ಇದೆ' ಎಂದು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದರು.</p>.<p class="Briefhead">ತನಿಖಾ ತಂಡ ಪುನರ್ ರಚನೆ ?</p>.<p>ತನಿಖಾ ತಂಡದಲ್ಲಿರುವ ಅಧಿಕಾರಿಗಳು ಕುಲಸಚಿವರು ಮತ್ತು ಕೆಎಎಸ್ ದರ್ಜೆಯವರು. ಕುಲಪತಿ ವಿರುದ್ಧ ಮತ್ತು ಐಎಎಸ್ ಅಧಿಕಾರಿಯಾಗಿರುವ ಕೆ. ಜ್ಯೋತಿ ಅವರ ವಿಚಾರಣೆ ನಡೆಸಬೇಕಾಗುತ್ತದೆ. ಇದರಿಂದ ಶಿಷ್ಟಾಚಾರ ಉಲ್ಲಂಘನೆಯೂ ಆಗಲಿದೆ.</p>.<p>ಜ.29ರಂದೇ ತಂಡವನ್ನು ರಚಿಸಲಾಗಿದೆ. ನಾಲ್ಕು ದಿನದೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ. ಆದರೆ, ಶಿಷ್ಟಾಚಾರದ ಉಲ್ಲಂಘನೆ ಆಗುತ್ತದೆ ಎಂಬ ಕಾರಣದಿಂದ ತಂಡವು ಇನ್ನೂ ತನಿಖೆ ಆರಂಭಿಸಿಲ್ಲ. ತನಿಖಾ ತಂಡವನ್ನು ಪುನರ್ರಚಿಸಿ, ಐಎಎಸ್ ಮಟ್ಟದ ಅಧಿಕಾರಿಗೆ ತನಿಖೆಯ ನೇತೃತ್ವ ವಹಿಸುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>