‘ಕೋಲಾರ ಜಿಲ್ಲೆ ಮುಳಬಾಗಿಲಿನವನಾದ ಆರೋಪಿಯು ಕೆ.ಆರ್.ಪುರ, ಬಾಣಸವಾಡಿ, ಕೃಷ್ಣರಾಜ ಮಾರುಕಟ್ಟೆ, ಕಾಡುಗೊಂಡನಹಳ್ಳಿ, ಭಾರತೀನಗರ ಹಾಗೂ ನಗರದ ಇತರೆ ಭಾಗಗಳಿಂದ ಬೈಕ್ಗಳನ್ನು ಕದ್ದು ಮುಳಬಾಗಿಲಿಗೆ ಸಾಗಿಸುತ್ತಿದ್ದ. ಅಲ್ಲಿ ಗ್ಯಾರೆಜ್ವೊಂದನ್ನು ನಡೆಸುತ್ತಿದ್ದ ಆತ ಕದ್ದ ವಾಹನಗಳ ಬಿಡಿಭಾಗಗಳನ್ನು ತೆಗೆದು ರಿಪೇರಿಗೆ ತರುತ್ತಿದ್ದ ವಾಹನಗಳಿಗೆ ಜೋಡಿಸುತ್ತಿದ್ದ. ಬಸವೇಶ್ವರ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್ಗಳನ್ನು ಕದ್ದಿರುವ ವಿಚಾರವನ್ನೂ ಆತ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.