ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡ್ಜ್‌ನಲ್ಲಿ ಬೆಂಗಳೂರಿನ ಉದ್ಯೋಗಿ ಅನುಮಾನಾಸ್ಪದ ಸಾವು

Last Updated 3 ಜನವರಿ 2021, 23:00 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯುಮೈಸೂರು ನಗರದ ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಜೊತೆಯಲ್ಲಿದ್ದ ಪತ್ನಿ ನಾಪತ್ತೆಯಾಗಿದ್ದಾರೆ.

ಯಶವಂತಪುರದ ನಿವಾಸಿ ಉಮಾಶಂಕರ್ (45) ಮೃತಪಟ್ಟವರು. ನಗರದ ಮಂಡಿ ಠಾಣೆ ಪೊಲೀಸರು ಕೊಠಡಿ ಪರಿಶೀಲಿಸಿದಾಗ ಇನ್ಸುಲಿನ್ ಬಾಟಲಿ ಮತ್ತು ಸಿರಿಂಜ್ ಲಭಿಸಿದೆ. ಇಬ್ಬರೂಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬರೆದ ಡೆತ್‌ ನೋಟ್‌ ಕೂಡ ಸಿಕ್ಕಿದೆ.ಡೆತ್‌ ನೋಟ್‌ ಬರೆದ ನಂತರ ಪತಿ ಮೃತಪಟ್ಟು, ಪತ್ನಿನಾಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

‘ಕೆಲ ವ್ಯಕ್ತಿಗಳು ಸಾಲ ಮರುಪಾವತಿಗೆ ಒತ್ತಾಯಿಸಿ ನಿಂದಿಸಿದ್ದು, ಅವಮಾನ ತಾಳಲಾರದೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂಬ ಅಂಶ ಡೆತ್‌ ನೋಟ್‌ನಲ್ಲಿ ಇದ್ದು, ಅದಕ್ಕೆ ದಂಪತಿ ಸಹಿ ಹಾಕಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎನಿಸಿದ್ದು,ಪತ್ನಿಯನ್ನುತನಿಖೆಗೆ ಒಳಪಡಿಸಿದ ಬಳಿಕ ನಿಜವಾದ ವಿಚಾರ ಗೊತ್ತಾಗಲಿದೆಎಂದು ಪೊಲೀಸರು ತಿಳಿಸಿದ್ದಾರೆ.

ಉಮಾಶಂಕರ್‌ ಅವರು ಪತ್ನಿ ಕವಿತಾ ಮತ್ತು ಪುತ್ರಿ ಜೊತೆ ಜ.1ರಂದು ಮೈಸೂರಿಗೆ ಬಂದಿದ್ದಾರೆ. ಬಳಿಕ ಇಲ್ಲಿನ ಜಯನಗರದ ಅತ್ತೆ ಮನೆಯಲ್ಲಿ (ಕವಿತಾ ತವರು ಮನೆ) ಪುತ್ರಿಯನ್ನು ಬಿಟ್ಟು ಬೆಂಗಳೂರಿಗೆ ಹಿಂದಿರುಗುವುದಾಗಿ ಹೇಳಿ ಹೊರಟಿದ್ದಾರೆ. ಆದರೆ, ಬೆಂಗಳೂರಿಗೆ ತೆರಳದೆ ಮಂಡಿ ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಶುಕ್ರವಾರ ರಾತ್ರಿ (ಜ.1) ಉಳಿದುಕೊಂಡಿದ್ದಾರೆ.

ಕೊಠಡಿಗೆ ಊಟ ತರಿಸಿಕೊಂಡ ಈ ದಂಪತಿ, ಮರುದಿನ ಮಧ್ಯಾಹ್ನ 2 ಗಂಟೆಯಾದರೂ ಹೊರಗೆ ಬಂದಿಲ್ಲ. ಸಿಬ್ಬಂದಿ ಹೋಗಿ ಕೊಠಡಿ ಪರಿಶೀಲಿಸಿದಾಗ ಉಮಾಶಂಕರ್ ಮೃತಪಟ್ಟಿರುವುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ನರ್ಸ್‌ ಆಗಿರುವ ಕವಿತಾ, ಲಾಡ್ಜ್‌ನಿಂದ ಶನಿವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹೊರ ಹೋಗಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT