ಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ ಬೆಳೆ ಕಟಾವು ಯಂತ್ರ ‘ಭೀಮ ಸಲಗ’ ರೈತರಿಗೆ ಬಹೂಪಯೋಗಿ ಉಪಕರಣವಾಗಿ ಸಿದ್ಧಪಡಿಸಲು ಪ್ರೇರಣೆಯಾಗಿದೆ. ಈ ಯಂತ್ರವನ್ನು ಗಳೆ ಹೊಡೆಯಲು, ಕಳೆ ತೆಗೆಯಲು, ಬೀಜ ಬಿತ್ತನೆ, ನೀರು ಮತ್ತು ಕೀಟನಾಶಕ ಸಿಂಪರಣೆ, ಬೆಳೆ ಕಟಾವು, ಹುಲ್ಲು ಕತ್ತರಿಸುವುದು, ಹೂದೋಟದ ಅಂಚಿನಲ್ಲಿರುವ ಸಸಿಗಳನ್ನು ಚೌಕಾಕಾರದಲ್ಲಿ ಕತ್ತರಿಸಲು, ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸಲು, ಲಿಂಬೆ ಸಸಿಯಂತ ಸಣ್ಣ ಸಸಿಗಳನ್ನು ನೆಡಲು, ನೆಲ ಅಗೆಯಲು ಸೇರಿದಂತೆ ಹಲವು ರೀತಿಯಲ್ಲಿ ಉಪಯೋಗಿಸುವಂತೆ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದರು.