ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಿದ್ದು, ‘ಕೊರೊನಾ ವೈರಾಣು ಸೋಂಕಿನಿಂದ ಆದ ಸಾವುಗಳಿಗೆ ಮೋದಿ, ಯಡಿಯೂರಪ್ಪ ಹೊಣೆ ಎಂದು ಮೀರ್ ಸಾದಿಕ್ ಬೊಬ್ಬೆ ಹೊಡೆಯುತ್ತಾರೆ. ಕೋವಿಡ್ ಸಾಂಕ್ರಾಮಿಕ ತಡೆಗೆ ಸರ್ಕಾರ ಮಾಡಿದ ಪ್ರಯತ್ನಗಳೇಕೆ ಕಣ್ಣಿಗೆ ಕಾಣುತ್ತಿಲ್ಲ’ ಎಂದು ಕೇಳಲಾಗಿದೆ.