ಬಿಜೆಪಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಬಿ.ಎಲ್.ಸಂತೋಷ್ ಅವರು ನಿಯುಕ್ತಿಗೊಂಡ ಬಳಿಕ ಹುದ್ದೆಯ ಮಹತ್ವವೂ ಹೆಚ್ಚಾಯಿತು. ಯಡಿಯೂರಪ್ಪ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಸಂತೋಷ್ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರ ಜತೆಗೆ ಸಂಘಟನೆಯನ್ನು ಬಲಪಡಿಸಿದರು. ಅಲ್ಲದೇ, ಪಕ್ಷದಲ್ಲಿ ಘಟಾನುಘಟಿ ನಾಯಕರ ಪ್ರಾಬಲ್ಯವನ್ನೂ ತಗ್ಗಿಸಿದರು. ಮೋದಿ ಪ್ರಧಾನಿ ಆದ ಬಳಿಕ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಹುದ್ದೆಗೆ ಸಂತೋಷ್ ಅವರನ್ನು ನಿಯುಕ್ತಿಗೊಳಿಸಲಾಯಿತು.