‘ಬಿಜೆಪಿ ಟಿಕೆಟ್ ಕೇಳುವುದು ಅಪರಾಧವಲ್ಲ. ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳಲು ಅವಕಾಶವಿದೆ. ಆದರೆ, ಪಕ್ಷಕ್ಕೊಂದು ಚೌಕಟ್ಟಿದೆ. ಟಿಕೆಟ್ ವಿಚಾರ ಹಾದಿಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ. ಆಂತರಿಕ ಹಾಗೂ ಬಹಿರಂಗ ಸಮೀಕ್ಷೆ ವರದಿ ಆಧರಿಸಿ ಪಕ್ಷದವರು ಅರ್ಹರಿಗೆ ಟಿಕೆಟ್ ಕೊಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.