‘ಶೇ 40 ಲಂಚಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ‘ಭ್ರಷ್ಟಾಚಾರ ಇವತ್ತು ನಿನ್ನೆಯ ಪ್ರಶ್ನೆ ಅಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪದಲ್ಲಿ ಬಂದಿದೆ. ಚರ್ಚೆಗೆ ನೀವೂ ಸಿದ್ಧರಿರಬೇಕು. ಸರ್ಕಾರವೂ ಇದಕ್ಕೆ ತಯಾರಿದೆ’ ಎಂದು ಹೇಳಿದರು.