ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಎಷ್ಟೆಲ್ಲಾ ಹಗರಣಗಳು ನಡೆದಿವೆ ಎಂಬ ವಿಚಾರ ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ, ಕಾನ್ಸ್ಟೆಬಲ್ ನೇಮಕಾತಿ ಮುಂತಾದ ಹಗರಣ ಕುರಿತ ದಾಖಲಾತಿ ಸಂಗ್ರಹಿಸಲಾಗಿದ್ದು ಅವರಿಗೆ ಶೀಘ್ರ ಕಳುಹಿಸುತ್ತೇನೆ. ಅದನ್ನು ನೋಡಿದ ನಂತರ ಅವರು ಮಾತನಾಡಲಿ’ ಎಂದರು.