ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿಸಿ.ಎಂ.ಪೂಣಚ್ಚ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಹೈಕೋರ್ಟ್ನ ಕೋರ್ಟ್ ಹಾಲ್ನಲ್ಲಿ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಅವರು ಪೂಣಚ್ಚ ಅವರಿಗೆ ಪ್ರಮಾಣ ಬೋಧಿಸಿದರು.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62. ಸದ್ಯ 44 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದುಸಿ.ಎಂ.ಪೂಣಚ್ಚ ನೇಮಕದಿಂದ ಈ ಸಂಖ್ಯೆ 45ಕ್ಕೆ ತಲುಪಿದಂತಾಗಿದೆ. ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಮುಂದಿನ ತಿಂಗಳ 3ಕ್ಕೆ (2022 ಜುಲೈ 3) ನಿವೃತ್ತರಾಗಲಿದ್ದಾರೆ.