ಶಾಸಕರಾದ ಸುನಿಲ್ ಕುಮಾರ್, ಬಸನಗೌಡ ಪಾಟೀಲ ಯತ್ನಾಳ, ಅಪ್ಪಚ್ಚುರಂಜನ್, ತಿಪ್ಪಾರೆಡ್ಡಿ, ಅರವಿಂದ ಬೆಲ್ಲದ, ಸಚಿವರಾದ ಕೆ.ಎಸ್.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಹಾಜರಾಗಿರಲಿಲ್ಲ. ಸುನಿಲ್ ಕುಮಾರ್ ಪಕ್ಷದ ಕೆಲಸದ ಮೇಲೆ ಕೇರಳಕ್ಕೆ ಹೋಗಿದ್ದರೆ, ಪಂಚಮಸಾಲಿ ಸ್ವಾಮೀಜಿಗಳ ಪಾದಯಾತ್ರೆ ಚಿತ್ರದುರ್ಗಕ್ಕೆ ಬಂದಿರುವುದರಿಂದ ತಿಪ್ಪಾರೆಡ್ಡಿ ಅಲ್ಲಿಗೆ ತೆರಳಿದ್ದಾರೆ.