ಫೆ.20ರಂದು ರಾತ್ರಿ ಹರ್ಷ ಹತ್ಯೆಯಾದ ನಂತರ ಮರುದಿನ ನಡೆದ ಶವಯಾತ್ರೆಯಲ್ಲಿ ಭಾಗವಹಿಸಿದ್ದಈಶ್ವರಪ್ಪ ಮತ್ತು ಚನ್ನಬಸಪ್ಪ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಠಾಣೆಗೆ ದೂರು ನೀಡಿದರೂ ಸ್ವೀಕರಿಸಿಲ್ಲ ಎಂದು ರಿಯಾಜ್ ಅಹಮದ್ ಕೋರ್ಟ್ ಮೊರೆಹೋಗಿದ್ದರು. ‘ಕೋರ್ಟ್ ಸೂಚನೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸಲಾಗುವುದು’ ಎಂದು ಠಾಣಾಧಿಕಾರಿ ತಿಳಿಸಿದರು.