‘ಅವರನ್ನು ಬಿಡಿ. ನಿಮಗೆ ಪ್ರಜ್ಞೆ ಇರಲಿಲ್ಲವೇ? ಸಂಬಂಧಿಸಿದ ಅಧಿಕಾರಿಯಾಗಿ ನೀವು ಬರಬೇಡಿ ಎಂದು ಹೇಳಬಹುದಿತ್ತು’ ಎಂದು ಕರೆ ಮಾಡಿದ ವ್ಯಕ್ತಿಯು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಅಧಿಕಾರಿಯು, ‘ನನ್ನಿಂದ ತಪ್ಪಾಗಿದೆ. ಶಿಕ್ಷೆ ಕೊಡಿಸಿ. ನೀವೇ ಏನು ಬೇಕಾದರೂ ಮಾಡಿಸಿ. ಇನ್ನೊಂದು ವರ್ಷ ಸೇವಾ ಅವಧಿಯಿದೆ. ಸ್ವಯಂ ನಿವೃತ್ತಿಯನ್ನಾದರೂ ಪಡೆಯುವೆ. ನಾವೂ ಮನುಷ್ಯರಲ್ವಾ. ತಪ್ಪು ನಡೆದಿದೆ. ನನಗೂ ಸಾಕಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದ್ದಾಗಲೂ ಇದೇ ರೀತಿ ಆಗಿತ್ತು’ ಎಂದೆಲ್ಲ ಅಸಹಾಯಕರಾಗಿ ಮಾತನಾಡಿದ್ದಾರೆ. ವೈರಲ್ ಆದ ಆಡಿಯೊಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.