ದೆಹಲಿಯ ಮೂರೂ ಗಡಿಗಳಲ್ಲಿ ಪ್ರತಿಭಟನಾನಿರತ ಸಾವಿರಾರು ರೈತರಿಗೆ, ನಿತ್ಯವೂ ಅವರ ಭೇಟಿಗೆ ಬರುತ್ತಿದ್ದ ರೈತ ಸಂಘಟನೆಗಳ ಸದಸ್ಯರಿಗೆ ಊಟ, ತಿಂಡಿ, ವೈದ್ಯಕೀಯ ನೆರವು, ಗಂಟೆಗೆ 2,200 ರೊಟ್ಟಿ ಸಿದ್ಧಪಡಿಸುವ ಯಂತ್ರ, ವಸತಿಗೆ ಟೆಂಟ್, ಫ್ಯಾನ್, ಕಂಬಳಿ, ಸ್ವೆಟರ್ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸಿದವರಲ್ಲಿ ಇವರ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ.