<p><strong>ಬೆಂಗಳೂರು: </strong>‘ಡಬಲ್ಡ್ ಹ್ಯಾಪ್ಲಾಯ್ಡ್’ ವಿಧಾನದ ಮೂಲಕ ಮೆಕ್ಕೆ ಜೋಳದ ಹೈಬ್ರಿಡ್ ತಳಿಗಳ ಅಭಿವೃದ್ಧಿಗೆ ಅಗತ್ಯ ಪೋಷಕ ಸಾಲುಗಳನ್ನು (ಪೇರೆಂಟಲ್ ಲೈನ್ಸ್) ಕೃತಕವಾಗಿ ಉತ್ಪಾದಿಸುವ ಕೇಂದ್ರವನ್ನುಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕುಣಿಗಲ್ನಲ್ಲಿ ಆರಂಭಿಸಲಾಗಿದೆ.</p>.<p>ಕುಣಿಗಲ್ನ ರಂಗಸ್ವಾಮಿಗುಡ್ಡದ ಕಾವಲ್ ಬಳಿ ಇರುವ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಕೇಂದ್ರದ ವಿಶಾಲ ಪ್ರದೇಶದಲ್ಲಿ ಈ ಕೇಂದ್ರ ತೆರೆಯಲುಮೆಕ್ಸಿಕೋದ ಅಂತರರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ (ಸಿಐಎಂಎಂವೈಟಿ) ಹಾಗೂ ಬೆಂಗಳೂರು ಕೃಷಿ ಸಂಶೋಧನಾ ವಿಶ್ವವಿದ್ಯಾಲಯ (ಯುಎಎಸ್–ಬಿ) ನಡುವೆ ಒಪ್ಪಂದ ನಡೆದಿತ್ತು.</p>.<p>ಅದರಂತೆ ಈ ಕೇಂದ್ರ ನಿರ್ಮಾಣಕ್ಕೆ ಸಿಐಎಂಎಂವೈಟಿ ಆರ್ಥಿಕ ನೆರವು ನೀಡಿತ್ತು. ಮೂರು ವರ್ಷಗಳಲ್ಲಿ ಈ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು,ಕಳೆದ ಡಿಸೆಂಬರ್ನಿಂದ ಕಾರ್ಯಾರಂಭಗೊಂಡಿದೆ.</p>.<p>ಹ್ಯಾಪ್ಲಾಯ್ಡ್ ಕೋಶಗಳು ವರ್ಣತಂತು (ಕ್ರೋಮೊಸೋಮ್) ದ್ವಿಗುಣಗೊಂಡಾಗ ರೂಪುಗೊಂಡ ಜೀನೋಟೈಪ್. ಈ ದ್ವಿಗುಣಗೊಂಡ ಹ್ಯಾಪ್ಲಾಯ್ಡ್ಗಳ ಕೃತಕ ಉತ್ಪಾದನೆಯು ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ ಪೂರಕವಾದ ತಾಂತ್ರಿಕತೆ ಈ ಕೇಂದ್ರದಲ್ಲಿದೆ.</p>.<p>‘ಮೆಕ್ಕೆಜೋಳದ ಬೆಳೆಯಲ್ಲಿ ಹ್ಯಾಪ್ಲಾಯ್ಡ್ ಸಂತತಿಯನ್ನು ಉತ್ಪಾದಿಸಿ, ನಂತರ ‘ಕಾಲ್ಚಿಸಿನ್’ ರಾಸಾಯನಿಕದ ಸಹಾಯದಿಂದ ದ್ವಿಗುಣಗೊಂಡ ಪೋಷಕ ಸಾಲುಗಳನ್ನು ಈ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತದೆ. ಇವುಗಳ ಉತ್ಪಾದನೆಗೆ ಮೊದಲು 6 ವರ್ಷಗಳಷ್ಟು ಸಮಯ ಬೇಕಾಗಿತ್ತು. ಹ್ಯಾಪ್ಲಾಯ್ಡ್ ವಿಧಾನದ ಮೂಲಕ ಕೇವಲ ಎರಡೇ ವರ್ಷಗಳಲ್ಲಿ ಪೋಷಕ ಸಾಲುಗಳನ್ನು ಉತ್ಪಾದಿಸಬಹುದು’ ಎಂದು ಈ ಕೇಂದ್ರದ ಸಂಯೋಜಕ ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಎಚ್.ಸಿ.ಲೋಹಿತಾಶ್ವ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಹಸಿರುಮನೆಯಲ್ಲಿ (ಪಾಲಿಹೌಸ್) ಮೊದಲುಪೋಷಕ ಸಾಲುಗಳ ಉತ್ಪಾದನೆ ನಡೆಯುತ್ತದೆ. ನಂತರ ಅದನ್ನು ಬಯಲು ಪ್ರದೇಶದ ಸಂಶೋಧನಾ ತಾಕುಗಳಲ್ಲಿ ಬೆಳೆಸುತ್ತೇವೆ. ತಳಿಗಳಿಗೆ ಬೇಕಿರುವ ಪೋಷಕ ಸಾಲುಗಳನ್ನುತ್ವರಿತಗತಿಯಲ್ಲಿ ಉತ್ಪಾದಿಸಿ ಅವುಗಳನ್ನು ರಾಜ್ಯ ಹಾಗೂ ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಬೀಜೋತ್ಪಾದನಾ ಸಂಸ್ಥೆಗಳಿಗೆ ತಲುಪಿಸುವ ಕೆಲಸವನ್ನು ಈ ಕೇಂದ್ರ ಮಾಡಲಿದೆ. ಕೇಂದ್ರದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿದ್ದು, ರೈತರಿಗೂ ವರದಾನವಾಗಲಿದೆ’ ಎಂದು ವಿವರಿಸಿದರು.</p>.<p>‘ರಾಜ್ಯದಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿರುವುದರಿಂದ ವಿಶ್ವವಿದ್ಯಾಲಯದಲ್ಲಿ ಮೆಕ್ಕೆಜೋಳದ ಅಭಿವೃದ್ಧಿ ಕುರಿತು ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಕೀನ್ಯಾ ಹಾಗೂ ಮೆಕ್ಸಿಕೋಗಳಲ್ಲಿ ಮಾತ್ರ ಇಂತಹ ಉತ್ಪಾದನಾ ಕೇಂದ್ರಗಳಿದ್ದವು. ಕುಣಿಗಲ್ನ ಈ ಕೇಂದ್ರವು ಏಷ್ಯಾದಲ್ಲೇ ಮೊದಲಡಬಲ್ಡ್ ಹ್ಯಾಪ್ಲಾಯ್ಡ್ ಉತ್ಪಾದನಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ದೇಶದ ಸರ್ಕಾರಿ ವಲಯದಲ್ಲೂ ಇಂತಹ ಪ್ರಯತ್ನ ನಡೆದಿದ್ದು ಇದೇ ಮೊದಲು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಡಬಲ್ಡ್ ಹ್ಯಾಪ್ಲಾಯ್ಡ್’ ವಿಧಾನದ ಮೂಲಕ ಮೆಕ್ಕೆ ಜೋಳದ ಹೈಬ್ರಿಡ್ ತಳಿಗಳ ಅಭಿವೃದ್ಧಿಗೆ ಅಗತ್ಯ ಪೋಷಕ ಸಾಲುಗಳನ್ನು (ಪೇರೆಂಟಲ್ ಲೈನ್ಸ್) ಕೃತಕವಾಗಿ ಉತ್ಪಾದಿಸುವ ಕೇಂದ್ರವನ್ನುಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕುಣಿಗಲ್ನಲ್ಲಿ ಆರಂಭಿಸಲಾಗಿದೆ.</p>.<p>ಕುಣಿಗಲ್ನ ರಂಗಸ್ವಾಮಿಗುಡ್ಡದ ಕಾವಲ್ ಬಳಿ ಇರುವ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಕೇಂದ್ರದ ವಿಶಾಲ ಪ್ರದೇಶದಲ್ಲಿ ಈ ಕೇಂದ್ರ ತೆರೆಯಲುಮೆಕ್ಸಿಕೋದ ಅಂತರರಾಷ್ಟ್ರೀಯ ಮೆಕ್ಕೆಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ (ಸಿಐಎಂಎಂವೈಟಿ) ಹಾಗೂ ಬೆಂಗಳೂರು ಕೃಷಿ ಸಂಶೋಧನಾ ವಿಶ್ವವಿದ್ಯಾಲಯ (ಯುಎಎಸ್–ಬಿ) ನಡುವೆ ಒಪ್ಪಂದ ನಡೆದಿತ್ತು.</p>.<p>ಅದರಂತೆ ಈ ಕೇಂದ್ರ ನಿರ್ಮಾಣಕ್ಕೆ ಸಿಐಎಂಎಂವೈಟಿ ಆರ್ಥಿಕ ನೆರವು ನೀಡಿತ್ತು. ಮೂರು ವರ್ಷಗಳಲ್ಲಿ ಈ ಕೇಂದ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು,ಕಳೆದ ಡಿಸೆಂಬರ್ನಿಂದ ಕಾರ್ಯಾರಂಭಗೊಂಡಿದೆ.</p>.<p>ಹ್ಯಾಪ್ಲಾಯ್ಡ್ ಕೋಶಗಳು ವರ್ಣತಂತು (ಕ್ರೋಮೊಸೋಮ್) ದ್ವಿಗುಣಗೊಂಡಾಗ ರೂಪುಗೊಂಡ ಜೀನೋಟೈಪ್. ಈ ದ್ವಿಗುಣಗೊಂಡ ಹ್ಯಾಪ್ಲಾಯ್ಡ್ಗಳ ಕೃತಕ ಉತ್ಪಾದನೆಯು ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ ಪೂರಕವಾದ ತಾಂತ್ರಿಕತೆ ಈ ಕೇಂದ್ರದಲ್ಲಿದೆ.</p>.<p>‘ಮೆಕ್ಕೆಜೋಳದ ಬೆಳೆಯಲ್ಲಿ ಹ್ಯಾಪ್ಲಾಯ್ಡ್ ಸಂತತಿಯನ್ನು ಉತ್ಪಾದಿಸಿ, ನಂತರ ‘ಕಾಲ್ಚಿಸಿನ್’ ರಾಸಾಯನಿಕದ ಸಹಾಯದಿಂದ ದ್ವಿಗುಣಗೊಂಡ ಪೋಷಕ ಸಾಲುಗಳನ್ನು ಈ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತದೆ. ಇವುಗಳ ಉತ್ಪಾದನೆಗೆ ಮೊದಲು 6 ವರ್ಷಗಳಷ್ಟು ಸಮಯ ಬೇಕಾಗಿತ್ತು. ಹ್ಯಾಪ್ಲಾಯ್ಡ್ ವಿಧಾನದ ಮೂಲಕ ಕೇವಲ ಎರಡೇ ವರ್ಷಗಳಲ್ಲಿ ಪೋಷಕ ಸಾಲುಗಳನ್ನು ಉತ್ಪಾದಿಸಬಹುದು’ ಎಂದು ಈ ಕೇಂದ್ರದ ಸಂಯೋಜಕ ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಎಚ್.ಸಿ.ಲೋಹಿತಾಶ್ವ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಹಸಿರುಮನೆಯಲ್ಲಿ (ಪಾಲಿಹೌಸ್) ಮೊದಲುಪೋಷಕ ಸಾಲುಗಳ ಉತ್ಪಾದನೆ ನಡೆಯುತ್ತದೆ. ನಂತರ ಅದನ್ನು ಬಯಲು ಪ್ರದೇಶದ ಸಂಶೋಧನಾ ತಾಕುಗಳಲ್ಲಿ ಬೆಳೆಸುತ್ತೇವೆ. ತಳಿಗಳಿಗೆ ಬೇಕಿರುವ ಪೋಷಕ ಸಾಲುಗಳನ್ನುತ್ವರಿತಗತಿಯಲ್ಲಿ ಉತ್ಪಾದಿಸಿ ಅವುಗಳನ್ನು ರಾಜ್ಯ ಹಾಗೂ ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಬೀಜೋತ್ಪಾದನಾ ಸಂಸ್ಥೆಗಳಿಗೆ ತಲುಪಿಸುವ ಕೆಲಸವನ್ನು ಈ ಕೇಂದ್ರ ಮಾಡಲಿದೆ. ಕೇಂದ್ರದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಿಗಲಿದ್ದು, ರೈತರಿಗೂ ವರದಾನವಾಗಲಿದೆ’ ಎಂದು ವಿವರಿಸಿದರು.</p>.<p>‘ರಾಜ್ಯದಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿರುವುದರಿಂದ ವಿಶ್ವವಿದ್ಯಾಲಯದಲ್ಲಿ ಮೆಕ್ಕೆಜೋಳದ ಅಭಿವೃದ್ಧಿ ಕುರಿತು ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಕೀನ್ಯಾ ಹಾಗೂ ಮೆಕ್ಸಿಕೋಗಳಲ್ಲಿ ಮಾತ್ರ ಇಂತಹ ಉತ್ಪಾದನಾ ಕೇಂದ್ರಗಳಿದ್ದವು. ಕುಣಿಗಲ್ನ ಈ ಕೇಂದ್ರವು ಏಷ್ಯಾದಲ್ಲೇ ಮೊದಲಡಬಲ್ಡ್ ಹ್ಯಾಪ್ಲಾಯ್ಡ್ ಉತ್ಪಾದನಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ದೇಶದ ಸರ್ಕಾರಿ ವಲಯದಲ್ಲೂ ಇಂತಹ ಪ್ರಯತ್ನ ನಡೆದಿದ್ದು ಇದೇ ಮೊದಲು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>