ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್ನ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಎರಡು ವರ್ಷಗಳಿಂದ ಬರಪೀಡಿತವಾಗಿರುವ ತಾಲ್ಲೂಕಿಗೆ ₹35 ಲಕ್ಷ (ಕಾರ್ಯಪಡೆಗೆ ₹25 ಲಕ್ಷ, ಸಿಇಒ ಖಾತೆಗೆ ₹10 ಲಕ್ಷ), ಒಂದು ವರ್ಷದಿಂದ ಬರಪೀಡಿತವಾಗಿರುವ ತಾಲ್ಲೂಕಿಗೆ ₹25 ಲಕ್ಷ (ಕಾರ್ಯಪಡೆ್ಗೆ ₹15 ಲಕ್ಷ, ಸಿಇಒ ಖಾತೆಗೆ ₹10 ಲಕ್ಷ) ಹಾಗೂ ಬರಪೀಡಿತವಲ್ಲದ ತಾಲ್ಲೂಕಿಗೆ ₹15 ಲಕ್ಷ (ಕಾರ್ಯಪಡೆಗೆ ₹10 ಲಕ್ಷ) ಬಿಡುಗಡೆ ಮಾಡಲಾಗುವುದು‘ ಎಂದರು.