ರೈತ ಯಲ್ಲಪ್ಪ ರಾಣೋಜಿ ಎಂಬುವವರ ಮನೆಯ ಖಾತೆ ಬದಲಾವಣೆ ಮಾಡಲು ಪುರಸಭೆ ಅಧಿಕಾರಿಯೊಬ್ಬರು ₹ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ತನ್ನ ಎತ್ತನ್ನು ಪುರಸಭೆಗೆ ತಂದಿದ್ದ ರಾಣೋಜಿ, ‘ನನ್ನ ಬಳಿ ಹಣವಿಲ್ಲ. ಎತ್ತು ತೆಗೆದುಕೊಳ್ಳಿ’ ಎಂದು ಮನವಿ ಮಾಡಿದ್ದರು. ‘ಎತ್ತಿನ ಸಮೇತ ಪುರಸಭೆಗೆ ಬಂದ ರೈತ; ಲಂಚ: ಅಧಿಕಾರಿಗೆ ಎತ್ತು ಕೊಡಲು ಮುಂದಾದ ರೈತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಅದನ್ನು ಆಧರಿಸಿ ಮಂಗಳವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತರು, ವಿಚಾರಣೆಗೆ ಆದೇಶಿಸಿದ್ದಾರೆ.