‘ರುದ್ರೇಶಪ್ಪ ಅವರ ಹೆಸರಲ್ಲಿ ಮತ್ತು ತಾಯಿ, ಸಹೋದರರ ಹೆಸರಿನಲ್ಲಿ ಜಮೀನು ಇದೆ. ವಿವಿಧ ಬ್ಯಾಂಕ್ಗಳಲ್ಲಿ ₹ 1.70 ಲಕ್ಷ ಸಾಲ ಪಡೆದಿದ್ದರು. ಜಮೀನಿನಲ್ಲಿ ಸಮರ್ಪಕ ಇಳುವರಿ ಬಾರದೆ ನಷ್ಟವಾಗಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ರುದ್ರೇಶಪ್ಪ ಅವರ ಮಾವ ಬಾನುವಳ್ಳಿ ಕರಿಯಪ್ಪ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.