ಜಾತಿ ಸೂಚಕ ಸಮುದಾಯಗಳನ್ನು ಹುಡುಕಿ ದಿನಾಚರಣೆ ಘೋಷಣೆಯನ್ನು ಸರ್ಕಾರ ಮಾಡುತ್ತಿದೆ. ಆದರೆ, ಎಲ್ಲ ಜಾತಿಯಲ್ಲೂ ಅಂಗವಿಕಲರಿದ್ದು, ಆರ್ಥಿಕವಾಗಿ ಏನೂ ನೆರವು ಸಿಗದ ಶೋಷಿತ ಸಮುದಾಯವಾಗಿಯೇ ಉಳಿದಿದ್ದಾರೆ. ಸರ್ಕಾರಗಳಿಗೆ ಕಾಳಜಿ ಇದ್ದರೆ ಇಂತಹ ಅಲಕ್ಷಿತ ಸಮುದಾಯದವರ ಏಳಿಗೆಗೆ ಆದ್ಯತೆ ಮೇರೆಗೆ ಕಾರ್ಯಕ್ರಮ ರೂಪಿಸಬೇಕು. ಅಂಗವಿಕಲರ ಅಧಿನಿಯಮದಡಿ ನೇಮಕವಾಗಿರುವ ಆಯುಕ್ತರ ಅವಧಿ ಮುಗಿಯಲು ಇನ್ನು ಎರಡು ತಿಂಗಳಷ್ಟೇ ಇದೆ. ಮುಂದಿನ ಆಯುಕ್ತರ ನೇಮಕಾತಿ ಬಗ್ಗೆ ಸರ್ಕಾರಕ್ಕೆ ಆಸಕ್ತಿಯೇ ಇದ್ದಂತಿಲ್ಲ ಎಂದು ಚಂದ್ರಶೇಖರ ಪುಟ್ಟಪ್ಪ ದೂರಿದ್ದಾರೆ.