ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ತಲಾ ₹ 10,000 ನೀಡಿದರೆ ಒಟ್ಟು ₹ 10,000 ಕೋಟಿ ಬೇಕಾಗುತ್ತದೆ. ಮೇ ತಿಂಗಳಲ್ಲಿ ಅಬಕಾರಿ ಇಲಾಖೆಗೆ ಶೇಕಡ 150ರಷ್ಟು ಹೆಚ್ಚಿನ ವರಮಾನ ಸಂಗ್ರಹವಾಗಿದೆ. ಅನಗತ್ಯವಾಗಿ ಸಾವಿರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಮಂಜೂರು ಮಾಡುವುದನ್ನು ಸ್ಥಗಿತಗೊಳಿಸಬೇಕು. ಲಭ್ಯವಿರುವ ಹಣದಲ್ಲಿ ₹ 10,000 ಕೋಟಿಯನ್ನು ಪರಿಹಾರ ವಿತರಣೆಗೆ ಬಳಸಬೇಕು’ ಎಂದು ಒತ್ತಾಯಿಸಿದ್ದಾರೆ.