‘ಬುದ್ಧಿಮಾಂದ್ಯ ಮಕ್ಕಳಿಗೆ ಶೆಲ್ಟರ್ ವರ್ಕ್ಶಾಪ್ ನಿರ್ಮಿಸಿ ಸ್ವಉದ್ಯೋಗಕ್ಕೆ ನೆರವು ನೀಡಲಾಗುವುದು. 2 ಸಾವಿರ ಟ್ರೈಸಿಕಲ್ ಖರೀದಿಸಿ ಎಲ್ಲ ಜಿಲ್ಲೆಗಳ ಅಂಗವಿಕಲರಿಗೆ ಮಾರ್ಚ್ ವೇಳೆಗೆ ವಿತರಣೆ ಮಾಡಲಾಗುವುದು. ಈಗ ಟ್ರೈಸಿಕಲ್ಗೆ ನೀಡುತ್ತಿದ್ದ ಅನುದಾನವನ್ನು ₹ 15 ಕೋಟಿಯಿಂದ ₹ 25 ಕೋಟಿಗೆ ಏರಿಕೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.