ಗದಗ– ಬೆಟಗೇರಿ ನಗರಸಭೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಅನುಷ್ಠಾನಕ್ಕೆ ಬಂದಿರುವ ತಾಲ್ಲೂಕು ಪಂಚಾಯ್ತಿಗಳನ್ನು ಯಾವ ಕಾರಣಕ್ಕೂ ರಾಜ್ಯ ಸರ್ಕಾರ ರದ್ದುಗೊಳಿಸಲು ಬರುವುದಿಲ್ಲ. ಅಧಿಕಾರಶಾಹಿ ಮನೋಭಾವ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಸರ್ಕಾರಗಳು ತಾಲ್ಲೂಕು ಪಂಚಾಯ್ತಿಗಳನ್ನು ಯಾವ ಎತ್ತರಕ್ಕೆ ಬೆಳೆಸಬೇಕಿತ್ತೋ, ಗಟ್ಟಿಗೊಳಿಸಬೇಕಿತ್ತೋ ಆ ಕೆಲಸವನ್ನು ಮಾಡಲಿಲ್ಲ’ ಎಂದು ಹೇಳಿದರು.