ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ(ಕೆಪಿಐಡಿ) ಕಾಯ್ದೆ 2004ರ ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಐಎಎಸ್ ಅಧಿಕಾರಿ ಹರ್ಷ ಗುಪ್ತ ವಿವರಣೆ ಸಲ್ಲಿಸಿದ್ದು, ‘2021ರ ಜನವರಿ 3ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು ₹2,695 ಕೋಟಿ ವಾಪಸ್ ಕೋರಿ ಅರ್ಜಿಗಳು ಬಂದಿವೆ’ ಎಂದು ವಿವರಿಸಿದ್ದಾರೆ.