‘ಶಾಸಕ ಜಮೀರ್ ಅಹಮದ್ ಖಾನ್ ಶ್ರೀಲಂಕಾಕ್ಕೆ ಹೋಗಿದ್ದಾರೆ’ ಎಂಬ ಆರೋಪಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಡ್ರಗ್ಸ್ಗೆ ಪಕ್ಷ ಇದೆಯಾ? ಈ ಜಾಲದಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ ಶಿಕ್ಷೆಗೆ ಒಳಪಡಿಸಿ. ಆದರೆ, ಸರ್ಕಾರ ‘ಹಿಟ್ ಆ್ಯಂಡ್ ರನ್’ ಮಾಡಬಾರದು. ಅಲ್ಲದೇ, ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಸಾಕ್ಷ್ಯಾಧಾರಗಳಿಲ್ಲದ ಹೇಳಿಕೆಗಳನ್ನು ನೀಡಬಾರದು’ ಎಂದರು.