ಮಂಗಳವಾರ, ಮಾರ್ಚ್ 21, 2023
30 °C

ಪುಸ್ತಕ ಪ್ರಾಧಿಕಾರ: ಪುಸ್ತಕ, ಮುದ್ರಣ ಸೊಗಸು ಬಹುಮಾನ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2020ನೇ ಸಾಲಿನ ‘ಪುಸ್ತಕ ಸೊಗಸು’ ಹಾಗೂ ‘ಮುದ್ರಣ ಸೊಗಸು’ ಬಹುಮಾನಗಳನ್ನು ಮಂಗಳವಾರ ಪ್ರಕಟಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ ಅವರ ನೇತೃತ್ವದಲ್ಲಿ ಈ ಬಹುಮಾನಗಳಿಗೆ ಆಯ್ಕೆ ನಡೆದಿದೆ. ‘ಪುಸ್ತಕ ಸೊಗಸು’ ಮೊದಲನೇ ಬಹುಮಾನಕ್ಕೆ ಡಾ.ಎಸ್. ಗುರುಮೂರ್ತಿ ಅವರ ‘ಕದಂಬರು ಸಮಗ್ರ ಅವಲೋಕನ’ ಕೃತಿಯನ್ನು ಹೊರತಂದಿರುವ ಬೆಂಗಳೂರಿನ ಭವತಾರಿಣಿ ಪ್ರಕಾಶನ ಆಯ್ಕೆಯಾಗಿದೆ. ದ್ವಿತೀಯ ಬಹುಮಾನಕ್ಕೆ ಡಾ. ಅಮರೇಶ ಯತಗಲ್ ಅವರ ‘ಸಾರ್ಥಕ ಬದುಕು’ ಕೃತಿಗೆ ರಾಯಚೂರಿನ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಹಾಗೂ ಮೂರನೇ ಬಹುಮಾನಕ್ಕೆ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ‘ಕಲಾಸಂಚಯ’ ಕೃತಿಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಭಾಜನವಾಗಿದೆ.

ಈ ಬಹುಮಾನಗಳು ಕ್ರಮವಾಗಿ ₹ 25 ಸಾವಿರ, ₹ 20 ಸಾವಿರ ಹಾಗೂ ₹ 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ. ‘ಮಕ್ಕಳ ಪುಸ್ತಕ ಸೊಗಸು’ ಬಹುಮಾನಕ್ಕೆ ತಮ್ಮಣ್ಣ ಬೀಗಾರ ಅವರ ‘ಫ್ರಾಗಿ ಮತ್ತು ಗೆಳೆಯರು...’ ಕೃತಿಯನ್ನು ಹೊರತಂದಿರುವ ತುಮಕೂರಿನ ಗೋಮಿನಿ ಪ್ರಕಾಶನ ಆಯ್ಕೆಯಾಗಿದೆ. ಈ ಬಹುಮಾನವು ₹ 8 ಸಾವಿರ ನಗದು ಒಳಗೊಂಡಿದೆ. ‘ಮುಖಪುಟ ಚಿತ್ರ ವಿನ್ಯಾಸ ಬಹುಮಾನ’ಕ್ಕೆ ಲಕ್ಷ್ಮೀಕಾಂತ ಮಿರಜಕರ ಅವರ ‘ಬಯಲೊಳಗೆ ಬಯಲಾಗಿ’ ಕೃತಿಗೆ ಮೈಸೂರಿನ ಕಲಾವಿದ ಹಾದಿಮನಿ ಟಿ.ಎಫ್., ‘ಮುಖಪುಟ ಚಿತ್ರಕಲೆಯ ಬಹುಮಾನ’ಕ್ಕೆ ರೂಪಾ ಹಾಸನ ಅವರ ಸಂಪಾದಕತ್ವದ ‘ಹೆಣ್ಣೊಳನೋಟ’ ಕೃತಿಗೆ ಬೆಂಗಳೂರಿನ ಕಲಾವಿದ ಸುಧಾಕರ ದರ್ಬೆ ಹಾಗೂ ‘ಪುಸ್ತಕ ಮುದ್ರಣ ಸೊಗಸು ಬಹುಮಾನ’ಕ್ಕೆ ಕಿರಣ್ ಭಟ್ ಅವರ ‘ರಂಗ ಕೈರಳಿ’ ಕೃತಿಗೆ ಬೆಂಗಳೂರಿನ ರೀಗಲ್ ಪ್ರಿಂಟ್ ಸರ್ವೀಸ್ ಆಯ್ಕೆಯಾಗಿದೆ.

ಈ ಪ್ರಶಸ್ತಿಗಳು ಕ್ರಮವಾಗಿ ₹ 10 ಸಾವಿರ, ₹ 8 ಸಾವಿರ ಹಾಗೂ ₹ 5 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ ಎಂದು ಪ್ರಕಟಣೆಯಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು