ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪ್ರಾಧಿಕಾರ: ಪುಸ್ತಕ, ಮುದ್ರಣ ಸೊಗಸು ಬಹುಮಾನ ಪ್ರಕಟ

Last Updated 13 ಜುಲೈ 2021, 12:53 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2020ನೇ ಸಾಲಿನ ‘ಪುಸ್ತಕ ಸೊಗಸು’ ಹಾಗೂ ‘ಮುದ್ರಣ ಸೊಗಸು’ ಬಹುಮಾನಗಳನ್ನು ಮಂಗಳವಾರ ಪ್ರಕಟಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ ಅವರ ನೇತೃತ್ವದಲ್ಲಿ ಈ ಬಹುಮಾನಗಳಿಗೆ ಆಯ್ಕೆ ನಡೆದಿದೆ. ‘ಪುಸ್ತಕ ಸೊಗಸು’ ಮೊದಲನೇ ಬಹುಮಾನಕ್ಕೆ ಡಾ.ಎಸ್. ಗುರುಮೂರ್ತಿ ಅವರ ‘ಕದಂಬರು ಸಮಗ್ರ ಅವಲೋಕನ’ ಕೃತಿಯನ್ನು ಹೊರತಂದಿರುವ ಬೆಂಗಳೂರಿನ ಭವತಾರಿಣಿ ಪ್ರಕಾಶನ ಆಯ್ಕೆಯಾಗಿದೆ. ದ್ವಿತೀಯ ಬಹುಮಾನಕ್ಕೆ ಡಾ. ಅಮರೇಶ ಯತಗಲ್ ಅವರ ‘ಸಾರ್ಥಕ ಬದುಕು’ ಕೃತಿಗೆ ರಾಯಚೂರಿನ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಹಾಗೂ ಮೂರನೇ ಬಹುಮಾನಕ್ಕೆ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ‘ಕಲಾಸಂಚಯ’ ಕೃತಿಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಭಾಜನವಾಗಿದೆ.

ಈ ಬಹುಮಾನಗಳು ಕ್ರಮವಾಗಿ ₹ 25 ಸಾವಿರ, ₹ 20 ಸಾವಿರ ಹಾಗೂ ₹ 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ. ‘ಮಕ್ಕಳ ಪುಸ್ತಕ ಸೊಗಸು’ ಬಹುಮಾನಕ್ಕೆ ತಮ್ಮಣ್ಣ ಬೀಗಾರ ಅವರ ‘ಫ್ರಾಗಿ ಮತ್ತು ಗೆಳೆಯರು...’ ಕೃತಿಯನ್ನು ಹೊರತಂದಿರುವ ತುಮಕೂರಿನ ಗೋಮಿನಿ ಪ್ರಕಾಶನ ಆಯ್ಕೆಯಾಗಿದೆ. ಈ ಬಹುಮಾನವು ₹ 8 ಸಾವಿರ ನಗದು ಒಳಗೊಂಡಿದೆ. ‘ಮುಖಪುಟ ಚಿತ್ರ ವಿನ್ಯಾಸ ಬಹುಮಾನ’ಕ್ಕೆ ಲಕ್ಷ್ಮೀಕಾಂತ ಮಿರಜಕರ ಅವರ ‘ಬಯಲೊಳಗೆ ಬಯಲಾಗಿ’ ಕೃತಿಗೆ ಮೈಸೂರಿನ ಕಲಾವಿದ ಹಾದಿಮನಿ ಟಿ.ಎಫ್., ‘ಮುಖಪುಟ ಚಿತ್ರಕಲೆಯ ಬಹುಮಾನ’ಕ್ಕೆ ರೂಪಾ ಹಾಸನ ಅವರ ಸಂಪಾದಕತ್ವದ ‘ಹೆಣ್ಣೊಳನೋಟ’ ಕೃತಿಗೆ ಬೆಂಗಳೂರಿನ ಕಲಾವಿದ ಸುಧಾಕರ ದರ್ಬೆ ಹಾಗೂ ‘ಪುಸ್ತಕ ಮುದ್ರಣ ಸೊಗಸು ಬಹುಮಾನ’ಕ್ಕೆ ಕಿರಣ್ ಭಟ್ ಅವರ ‘ರಂಗ ಕೈರಳಿ’ ಕೃತಿಗೆ ಬೆಂಗಳೂರಿನ ರೀಗಲ್ ಪ್ರಿಂಟ್ ಸರ್ವೀಸ್ ಆಯ್ಕೆಯಾಗಿದೆ.

ಈ ಪ್ರಶಸ್ತಿಗಳು ಕ್ರಮವಾಗಿ ₹ 10 ಸಾವಿರ, ₹ 8 ಸಾವಿರ ಹಾಗೂ ₹ 5 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ ಎಂದು ಪ್ರಕಟಣೆಯಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT