ಈ ಬಹುಮಾನಗಳು ಕ್ರಮವಾಗಿ ₹ 25 ಸಾವಿರ, ₹ 20 ಸಾವಿರ ಹಾಗೂ ₹ 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ. ‘ಮಕ್ಕಳ ಪುಸ್ತಕ ಸೊಗಸು’ ಬಹುಮಾನಕ್ಕೆ ತಮ್ಮಣ್ಣ ಬೀಗಾರ ಅವರ ‘ಫ್ರಾಗಿ ಮತ್ತು ಗೆಳೆಯರು...’ ಕೃತಿಯನ್ನು ಹೊರತಂದಿರುವ ತುಮಕೂರಿನ ಗೋಮಿನಿ ಪ್ರಕಾಶನ ಆಯ್ಕೆಯಾಗಿದೆ. ಈ ಬಹುಮಾನವು ₹ 8 ಸಾವಿರ ನಗದು ಒಳಗೊಂಡಿದೆ. ‘ಮುಖಪುಟ ಚಿತ್ರ ವಿನ್ಯಾಸ ಬಹುಮಾನ’ಕ್ಕೆ ಲಕ್ಷ್ಮೀಕಾಂತ ಮಿರಜಕರ ಅವರ ‘ಬಯಲೊಳಗೆ ಬಯಲಾಗಿ’ ಕೃತಿಗೆ ಮೈಸೂರಿನ ಕಲಾವಿದ ಹಾದಿಮನಿ ಟಿ.ಎಫ್., ‘ಮುಖಪುಟ ಚಿತ್ರಕಲೆಯ ಬಹುಮಾನ’ಕ್ಕೆ ರೂಪಾ ಹಾಸನ ಅವರ ಸಂಪಾದಕತ್ವದ ‘ಹೆಣ್ಣೊಳನೋಟ’ ಕೃತಿಗೆ ಬೆಂಗಳೂರಿನ ಕಲಾವಿದ ಸುಧಾಕರ ದರ್ಬೆ ಹಾಗೂ ‘ಪುಸ್ತಕ ಮುದ್ರಣ ಸೊಗಸು ಬಹುಮಾನ’ಕ್ಕೆ ಕಿರಣ್ ಭಟ್ ಅವರ ‘ರಂಗ ಕೈರಳಿ’ ಕೃತಿಗೆ ಬೆಂಗಳೂರಿನ ರೀಗಲ್ ಪ್ರಿಂಟ್ ಸರ್ವೀಸ್ ಆಯ್ಕೆಯಾಗಿದೆ.