ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಐವರ ಜಯಂತಿಯನ್ನು ಈ ವರ್ಷದಿಂದ ಆಚರಣೆ ಮಾಡಲುಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧಾರ ಕೈಗೊಂಡಿದೆ.
ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸಭೆ ಗುರುವಾರ ನಡೆಯಿತು.ಸರ್.ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್,ಶಿಶುನಾಳ ಶರೀಫ ಹಾಗೂಚನ್ನಬಸವ ಪಟ್ಟದೇವರು ಅವರ ಜಯಂತಿ ಆಚರಣೆಗೆ ಸಹಮತ ವ್ಯಕ್ತವಾಯಿತು.
ಶುಕ್ರವಾರವೂ ಸಭೆ ನಡೆಯಲಿದ್ದು, ಬೈ–ಲಾ ತಿದ್ದುಪಡಿಗೆ ಸಂಬಂಧಿಸಿದಂತೆಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ನೇತೃತ್ವದ ಸಮಿತಿಯ ಶಿಫಾರಸಿನ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಮೊಬೈಲ್ ಆ್ಯಪ್ ಮೂಲಕ ಚುನಾವಣೆ, ಸದಸ್ಯತ್ವಕ್ಕೆ ಶೈಕ್ಷಣಿಕ ಮಾನದಂಡ,ಸದಸ್ಯತ್ವ ಶುಲ್ಕ ₹ 500ರಿಂದ ₹ 250ಕ್ಕೆ ಇಳಿಕೆ ಸೇರಿದಂತೆ ವಿವಿಧ ಶಿಫಾರಸಿನ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ.