‘ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರ ಹೇಳಿಕೆ ಹಾಗೂ ಆರ್.ಎಸ್.ಎಸ್.ನ ಕೆಲವು ಮುಖಂಡರ ಆಕ್ರಮಣಕಾರಿ ವರ್ತನೆ ಪರಿಷತ್ತಿನ ಪ್ರಜಾಸತ್ತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರಲಿವೆ. ಆದ್ದರಿಂದ ಅವರುಗಳು ತಮ್ಮ ನಿಲುವುಗಳಿಗೆ ವಿಷಾದ ಸೂಚಿಸಿ, ಅಭಿಪ್ರಾಯವನ್ನು ಬದಲಿಸಿಕೊಳ್ಳಲಿ. ಅಭ್ಯರ್ಥಿ ಮಹೇಶ್ ಜೋಶಿ ಅವರು ಈ ಬಗ್ಗೆ ಹೊಣೆಯರಿತು, ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ಬಾರದಂತೆ ಜವಾಬ್ದಾರಿ ಮೆರೆಯಲಿ’ ಎಂದು ಹೇಳಿದ್ದಾರೆ.