ಬೆಂಗಳೂರು: ‘ರಾಜ್ಯದ ಶಾಲಾ ಕಾಲೇಜುಗಳಲ್ಲಿ ಭುಗಿಲೆದ್ದಿರುವ ವಿವಾದ ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿಸುವ ಕುಟಿಲ ತಂತ್ರ ಹೊಂದಿದ್ದು, ರಾಜ್ಯದ ಜನ ವಿಫಲಗೊಳಿಸಬೇಕು’ ಎಂದುಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
‘ಉಡುಪಿಯ ಒಂದು ಕಾಲೇಜಿನಲ್ಲಿ ಆರಂಭಗೊಂಡ ಸಮಸ್ಯೆ ರಾಜ್ಯಕ್ಕೆ ವ್ಯಾಪಿಸಲು ಕಾರಣವೇನು? ಶಾಂತಿ ಕದಡಲು ಸಂಚು ರೂಪಿಸಿದ ಸಂಘಟನೆಗಳು ಯಾವುವು? ಅವುಗಳಿಗೆ ಸರ್ಕಾರದ ಬೆಂಬಲವಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ವಿವಾದವನ್ನು ಆರಂಭದಲ್ಲೇ ಸರ್ಕಾರ ಸೌಹಾರ್ದದಿಂದ ಬಗೆಹರಿಸಬಹುದಿತ್ತು. ಆದರೆ, ಮಂತ್ರಿಗಳು, ಸಂಸದರು, ಶಾಸಕರು ಪ್ರಚೋದನಕಾರಿ ಹೇಳಿಕೆ ನೀಡಿ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಅಕ್ಷಮ್ಯ’ ಎಂದು ದೂರಿದ್ದಾರೆ.