ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live | ಗ್ರಾ.ಪಂ.ಚುನಾವಣೆ ಫಲಿತಾಂಶ: ಮಧ್ಯರಾತ್ರಿಯವರೆಗೂ ನಡೆದ ಮತ ಎಣಿಕೆ
LIVE

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಆರಂಭಗೊಂಡಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಯ ಕ್ಷಣಕ್ಷಣದ ಅಪ್‌ಡೇಟ್ಸ್‌ ಇಲ್ಲಿ ಲಭ್ಯ.
Last Updated 30 ಡಿಸೆಂಬರ್ 2020, 20:16 IST
ಅಕ್ಷರ ಗಾತ್ರ
20:1630 Dec 2020

ಹಾವೇರಿ ಜಿಲ್ಲೆಯಲ್ಲಿ ಅಹೋರಾತ್ರಿ ಮತ ಎಣಿಕೆ

ಹಾವೇರಿ: ಜಿಲ್ಲೆಯ 209 ಗ್ರಾಮ ಪಂಚಾಯಿತಿಗಳ ಪೈಕಿ ಇದುವರೆಗೆ 160 ಗ್ರಾಮ ಪಂಚಾಯಿತಿಗಳ ಫಲಿತಾಂಶ ಮಾತ್ರ ಪ್ರಕಟಗೊಂಡಿದೆ. ಅಂದರೆ ಶೇ 76ರಷ್ಟು ಫಲಿತಾಂಶ ಘೋಷಣೆಯಾಗಿದೆ.

18:3230 Dec 2020

ಬಿಳವಾರ: ಹರಾಜಿನಲ್ಲಿ ಭಾಗವಹಿಸಿದವರಿಗೇ ಗೆಲುವು!

ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಬಿಳವಾರ ಗ್ರಾಮದ 1ನೇ ವಾರ್ಡ್‌ನಲ್ಲಿ ಬರುವ 4 ಪಂಚಾಯಿತಿ ಸದಸ್ಯರ ಸ್ಥಾನಗಳ ಹರಾಜಿನಲ್ಲಿ ಭಾಗವಹಿಸಿದ್ದರು ಎನ್ನಲಾದ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

18:2230 Dec 2020

ಕಲಬುರ್ಗಿ: ಜಿಲ್ಲೆಯ 11 ಮತ ಎಣಿಕಾ ಕೇಂದ್ರಗಳಲ್ಲಿ ಬುಧವಾರ ರಾತ್ರಿ 11ರವರೆಗೆ 242 ಗ್ರಾ.ಪಂ.ಗಳ 1427 ಕ್ಷೇತ್ರಗಳ ಪೈಕಿ 205 ಗ್ರಾ.ಪಂ.ಗಳ 1191 ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, 3422 ಸದಸ್ಯರು ಆಯ್ಕೆಯಾಗಿದ್ದಾರೆ.

16:3930 Dec 2020

ಶಾಸಕ ದೇವಾನಂದ ಚವ್ಹಾಣ ಸಹೋದರಿಯರ ಸವಾಲ್‌: ಅಕ್ಕನನ್ನು ಸೋಲಿಸಿದ ತಂಗಿ

ವಿಜಯಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದೇವರಹಿಪ್ಪರಗಿ ತಾಲ್ಲೂಕಿನ ಹಿಟ್ಟಿನಹಳ್ಳಿ ತಾಂಡಾದ 4 ನೇ ವಾರ್ಡ್‌ನ ಚುನಾವಣೆ ಫಲಿತಾಂಶ ತಡರಾತ್ರಿ ಪ್ರಕಟಗೊಂಡಿದ್ದು, ಅಕ್ಕನನ್ನು ಸೋಲಿಸುವುದರ ಮೂಲಕ ಕಸ್ತೂರಿಬಾಯಿ ದೊಡಮನಿ ಆಯ್ಕೆಯಾಗಿದ್ದಾರೆ.

ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರ ಸಹೋದರಿಯರಾದ ನೀಲಾಬಾಯಿ ಅಂಗಡಿ ಹಾಗೂ ಕಸ್ತೂರಿಬಾಯಿ ದೊಡಮನಿ ಪರಸ್ಪರ ಸ್ಪರ್ಧಿಗಳಾಗಿದ್ದು, ಇಡೀ ಜಿಲ್ಲೆಯಲ್ಲಿ ಸಹೋದರಿಯರ ಸ್ಪರ್ಧೆ ಗಮನ ಸೆಳೆಯಲು ಕಾರಣವಾಗಿತ್ತು. ಇವರಿಬ್ಬರ ಸ್ಪರ್ಧೆಯ ಫಲಿತಾಂಶ ಕುತೂಹಲ ಕೆರಳಿಸಿತ್ತು.

ಜಿದ್ದಾಜಿದ್ದಿನ ಹಣಾಹಣೆಯಲ್ಲಿ ಕಸ್ತೂರಿಬಾಯಿ ದೊಡಮನಿ 342 ಮತ ಪಡೆದು ವಿಜೇತರಾದರು. ಅಕ್ಕ ನೀಲಾಬಾಯಿ ಅಂಗಡಿ 245 ಮತ ಪಡೆದು ಪರಾಭವಗೊಂಡರು.

16:0130 Dec 2020

ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿ ಸಾವು

ವಿಜಯಪುರ: ಇಂಡಿ ತಾಲ್ಲೂಕಿನ ತೆನಹಳ್ಳಿ ಗ್ರಾಮ ಪಂಚಾಯ್ತಿ ವಾರ್ಡ್ ನಂಬರ್ 1ರಿಂದ ಸ್ಪರ್ಧಿಸಿದ್ದ  
ಹಫೀಜ್ ಅಹ್ಮದ್ ಖುರೇಶಿ(55) ಮತ ಎಣಿಕೆ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಸಾವನಪ್ಪಿದ್ದಾರೆ.

ಇಂಡಿ ಮತ ಎಣಿಕೆ ಕೇಂದ್ರದಲ್ಲಿ ಸಂಜೆವರೆಗೂ ಇದ್ದ ಅವರು ಮತ ಎಣಿಕೆಯಲ್ಲಿನ ಏರುಪೇರುಗಳನ್ನು ಕಂಡು ಅಸ್ವಸ್ಥಗೊಂಡರು.ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾದರು.

ಹಫೀಜ್ ಸ್ಪರ್ಧೆ ಮಾಡಿರುವ ವಾರ್ಡ್‌ನ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದರು.

15:0330 Dec 2020
14:5730 Dec 2020

ಬೆಳಗಾವಿ: ಜಿಲ್ಲಾ ಪಂಚಾಯಿತಿ ಸದಸ್ಯೆಗೆ ಸೋಲು

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳೇಭಾವಿಯಲ್ಲಿ ‘ಆಪರೇಷನ್ ಕಮಲ’ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮಿ ವಿಠ್ಠಲ ಪಾರ್ವತಿ ಮತ್ತು ಅವರ ಮಾವ ನಾನಪ್ಪ ಪಾರ್ವತಿ ಅವರನ್ನು ಸುಳೇಭಾವಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೆಂಬಲಿಗರಾದ ಫಕೀರವ್ವ ಅಮರಾಪುರ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯ ಬಸನಗೌಡ ಹೂಂಕರಿ ಪಾಟೀಲ ಪರಾಭವಗೊಳಿಸಿದ್ದಾರೆ.

ಸೋತ ಈ ಇಬ್ಬರೂ ಇತ್ತೀಚೆಗೆ ಉಸ್ತುವಾರಿ ಸಚಿವರೊಂದಿಗೆ ಗುರುತಿಸಿಕೊಂಡಿದ್ದರು.

14:3430 Dec 2020
14:3330 Dec 2020
14:3230 Dec 2020