ಇದೇ ವೇಳೆ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಪ್ರಕರಣಗಳ ಪೋಸ್ಟಿಂಗ್ ಮತ್ತು ವಿಚಾರಣೆಗೆ ಪಟ್ಟಿ ನಿಗದಿಯಾಗುವಲ್ಲಿ ವಕೀಲರಿಗೆ ವಿಳಂಬವಾಗುತ್ತಿದ್ದು, ಇದನ್ನು ಬಗೆಹರಿಸಬೇಕೆಂದು ಮಾಡಿದ ಮನವಿಗೆ ಸ್ಪಂದಿಸಿದ ವರಾಳೆ ಅವರು, ‘ಆಧುನಿಕ ತಂತ್ರಜ್ಞಾನದ ಮುಖಾಂತರ ಪ್ರಕರಣಗಳ ಪೋಸ್ಟಿಂಗ್ ಹಾಗೂ ಲಿಸ್ಟಿಂಗ್ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸ
ಲಾಗುವುದು’ ಎಂದರು. ಪ್ರಾರ್ಥನೆ ಹಾಡಿದ ವಕೀಲ ಭಾರ್ಗವ ಅವರನ್ನು ವರಾಳೆ ಮನದುಂಬಿ ಶ್ಲಾಘಿಸಿದರು.