‘ವಜಾ ಅದೇಶಕ್ಕೂ ಮುನ್ನ ಅರ್ಜಿದಾರರ ಅಹವಾಲು ಆಲಿಸಿಲ್ಲ. ಎಲ್ಐಸಿ ನಿಬಂಧನೆಗಳ ಐದನೇ ವಿಧಿಯ ಅನುಸಾರ ನಿಯಮ ಪಾಲನೆಯ ಪ್ರಕ್ರಿಯೆ ಜೀವನಾಡಿ ಇದ್ದಂತೆ’ ಎಂದು ಹೇಳಿರುವ ನ್ಯಾಯಪೀಠ, ಶಿಸ್ತು ಪ್ರಾಧಿಕಾರವು 2019ರ ಮೇ 14ರಂದು ಹೊರಡಿಸಿದ್ದ ವಜಾ ಆದೇಶ ಮತ್ತು ಇದನ್ನು ಎತ್ತಿ ಹಿಡಿದಿದ್ದ ಮೇಲ್ಮನವಿ ಪ್ರಾಧಿಕಾರಗಳ ಆದೇಶವನ್ನು ರದ್ದುಗೊಳಿಸಿದೆ.