ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, 'ಭೂ ಮಾಫಿಯಾ, ಮರಳು ಕಳ್ಳಸಾಗಣೆ ಮಾಡುವವರು, ಕ್ರಿಮಿನಲ್ ಹಿನ್ನೆಲೆಯವರು, ಅವರ ಏಜೆಂಟರು ಸೇರಿದಂತೆ ಯಾವುದೇ ಮಾಫಿಯಾ ಜತೆ ಪೊಲೀಸರು ನಂಟು ಇರಿಸಿಕೊಳ್ಳಬಾರದು ಎಂದು ನಿರ್ದೇಶನ ನೀಡಿದ್ದೇನೆ. ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶ ಮಾಡದಂತೆಯೂ ಸೂಚಿಸಲಾಗಿದೆ' ಎಂದರು.