ಬೆಂಗಳೂರು: ಚಿತ್ರದುರ್ಗ ಮುರುಘಾ ಮಠಕ್ಕೆ ಸಂಬಂಧಿಸಿದ ವರದಿಗಳು ಅಥವಾ ಲೇಖನಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ರಾಜ್ಯದ ಪ್ರಮುಖ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಮುರುಘಾ ಶರಣರು ತಡೆ ಆದೇಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 64ರಲ್ಲಿ ಅಸಲು ದಾವೆ (ಒ.ಎಸ್. 2644/2022) ದಾಖಲಿಸಲಾಗಿದ್ದು ಒಟ್ಟು 43 ಮಾಧ್ಯಮ ಸಂಸ್ಥೆ ಗಳನ್ನು ಪ್ರತಿವಾದಿಗಳನ್ನು ಹೆಸರಿಸ ಲಾಗಿದೆ.
‘ಕೆಲವು ಪ್ರತಿಸ್ಪರ್ಧಿಗಳು ಮಠದ ಹೆಸರಿಗೆ ಮತ್ತು ನನಗೆ ಕಳಂಕ ತರಲು ಪ್ರಯತ್ನಿಸುತ್ತಿರುವ ಕಾರಣ ಮಠ ಮತ್ತು ನನಗೆ ಸಂಬಂಧಿಸಿದ ಯಾವುದೇ ವರದಿ ಅಥವಾ ಚರ್ಚೆಗಳನ್ನು ಪ್ರಕಟಿಸದಂತೆ ತಡೆ ನೀಡಬೇಕು’ ಎಂದು ಶರಣರು ದಾವೆಯಲ್ಲಿ ಕೋರಿದ್ದಾರೆ.