<p><strong>ಚಿತ್ರದುರ್ಗ:</strong>‘ಅಧಿಕಾರಕ್ಕಾಗಿ ರಾಷ್ಟ್ರವನ್ನು ವಿಭಜನೆ ಮಾಡಿದ ಕಾಂಗ್ರೆಸ್ನಲ್ಲಿ ರಾಷ್ಟ್ರೀಯ, ರಾಜ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಕಿದರು.</p>.<p>ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನ ಬಹುತೇಕ ನಾಯಕರು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಕೋಟಿ ಬೆಲೆಯ ವಾಚ್ ತೆಗೆದುಕೊಂಡ ಸಿದ್ದರಾಮಯ್ಯ ಯಾರಿಗೂ ಗೊತ್ತಿಲ್ಲದೆ ಕದ್ದು ತಿನ್ನುವ ದೊಡ್ಡ ಭ್ರಷ್ಟಾಚಾರಿ’ ಎಂದು ದೂರಿದರು.</p>.<p><a href="https://www.prajavani.net/karnataka-news/basavaraj-bommai-siddaramaiah-congress-bjp-karnataka-politics-940732.html" itemprop="url">ಬೊಮ್ಮಾಯಿಯವರೇ, ನೀವೂ ದ್ರಾವಿಡರೆ.. 'ಘರ್ ವಾಪಸಿ' ಆಗಿಬಿಡಿ: ಸಿದ್ದರಾಮಯ್ಯ </a></p>.<p>‘ಪದವಿ ಸಿಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದರು. ಲಿಂಗಾಯತರನ್ನು ವಿಭಜನೆ ಮಾಡಲು ಮುಂದಾಗಿದ್ದರು. ನಮ್ಮ ಆಡಳಿತದಲ್ಲಿ ವಿಭಜನೆಗಳಿಲ್ಲ’ ಎಂದು ತಿರುಗೇಟು ನೀಡಿದರು.</p>.<p>‘ಪಠ್ಯಪುಸ್ತಕದ ವಿಚಾರದಲ್ಲಿ ಯಾವ ಜಾತಿ, ಮತ, ಪಂಥ ಮುಖ್ಯವಲ್ಲ. ರಾಮಾಯಣ ವಾಲ್ಮೀಕಿ ಬರೆದಿದ್ದು, ಆದರ್ಶಗಳಷ್ಟೇ ಮುಖ್ಯ. ಭಗವದ್ಗೀತೆ ಬ್ರಾಹ್ಮಣ, ವೈಶ್ಯ, ಶೂದ್ರರ ಮನೆಯಲ್ಲೂ ಇವೆ. ಮೌಲ್ಯಧಾರಿತ ಶಿಕ್ಷಣ ಮುಖ್ಯ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong>‘ಅಧಿಕಾರಕ್ಕಾಗಿ ರಾಷ್ಟ್ರವನ್ನು ವಿಭಜನೆ ಮಾಡಿದ ಕಾಂಗ್ರೆಸ್ನಲ್ಲಿ ರಾಷ್ಟ್ರೀಯ, ರಾಜ್ಯ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಕಿದರು.</p>.<p>ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನ ಬಹುತೇಕ ನಾಯಕರು ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಕೋಟಿ ಬೆಲೆಯ ವಾಚ್ ತೆಗೆದುಕೊಂಡ ಸಿದ್ದರಾಮಯ್ಯ ಯಾರಿಗೂ ಗೊತ್ತಿಲ್ಲದೆ ಕದ್ದು ತಿನ್ನುವ ದೊಡ್ಡ ಭ್ರಷ್ಟಾಚಾರಿ’ ಎಂದು ದೂರಿದರು.</p>.<p><a href="https://www.prajavani.net/karnataka-news/basavaraj-bommai-siddaramaiah-congress-bjp-karnataka-politics-940732.html" itemprop="url">ಬೊಮ್ಮಾಯಿಯವರೇ, ನೀವೂ ದ್ರಾವಿಡರೆ.. 'ಘರ್ ವಾಪಸಿ' ಆಗಿಬಿಡಿ: ಸಿದ್ದರಾಮಯ್ಯ </a></p>.<p>‘ಪದವಿ ಸಿಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದರು. ಲಿಂಗಾಯತರನ್ನು ವಿಭಜನೆ ಮಾಡಲು ಮುಂದಾಗಿದ್ದರು. ನಮ್ಮ ಆಡಳಿತದಲ್ಲಿ ವಿಭಜನೆಗಳಿಲ್ಲ’ ಎಂದು ತಿರುಗೇಟು ನೀಡಿದರು.</p>.<p>‘ಪಠ್ಯಪುಸ್ತಕದ ವಿಚಾರದಲ್ಲಿ ಯಾವ ಜಾತಿ, ಮತ, ಪಂಥ ಮುಖ್ಯವಲ್ಲ. ರಾಮಾಯಣ ವಾಲ್ಮೀಕಿ ಬರೆದಿದ್ದು, ಆದರ್ಶಗಳಷ್ಟೇ ಮುಖ್ಯ. ಭಗವದ್ಗೀತೆ ಬ್ರಾಹ್ಮಣ, ವೈಶ್ಯ, ಶೂದ್ರರ ಮನೆಯಲ್ಲೂ ಇವೆ. ಮೌಲ್ಯಧಾರಿತ ಶಿಕ್ಷಣ ಮುಖ್ಯ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>