ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ‘ವಿದ್ಯಾರ್ಥಿಗಳ ಕೌಶಲ ಮತ್ತು ಸಾಮರ್ಥ್ಯವನ್ನು ವೃದ್ಧಿಸುವುದಕ್ಕೆ ಮಾತ್ರವಲ್ಲದೆ, ಆರೋಗ್ಯ ವಿಷಯದ ಕಡೆಗೂ ಆದ್ಯತೆ ನೀಡಲಾಗಿದೆ. ಕೌಶಲ ಆಧಾರಿತ ಪಠ್ಯಕ್ರಮ, ವೈಜ್ಞಾನಿಕ ಶಿಕ್ಷಣ ಶಾಸ್ತ್ರ, ಗುಣಮಟ್ಟದ ಮೌಲ್ಯಮಾಪನದಂತಹ ಅಂಶಗಳು ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧಾತ್ಮಕತೆಗೆ ಸಜ್ಜುಗೊಳಿಸಲಿವೆ’ ಎಂದರು.