ಬಿಜೆಪಿಯ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸಿ, ಒಂದು ಅಧಿಸೂಚನೆ ಅಡಿ ಸೇವಾ ಸಕ್ರಮಾತಿ ಹೊಂದಿದ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಒಂದೇ ಪಿಂಚಣಿ ನಿಯಮ ಅನ್ವಯಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಅನುದಾನಕ್ಕೆ ಒಳಪಟ್ಟ ಸಮಯದಲ್ಲಿ ನೇಮಕವಾಗಿ 2006ರ ನಂತರ ಆದೇಶ ಪಡೆದ ಉಪನ್ಯಾಸಕರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.