ತಾನು ಎಲ್ಲಿರಿಗಾಗಿ, ಎಲ್ಲರೂ ತನಗಾಗಿ ಎನ್ನುವುದೆ ಸಹಕಾರ ತತ್ವದ ಮೂಲ ಮಂತ್ರ. ಒಬ್ಬರಿಗಷ್ಟೇ ಲಾಭವಾಗುವ ಬೃಹತ್ ಕಂಪನಿಗಳ ಅಬ್ಬರ ತಗ್ಗಿಸಿ, ರಾಷ್ಟ್ರೀಯ ಆದಾಯ ಹೆಚ್ಚಾಗುವ ಇಂತಹ ಅಂಗಡಿಗಳ ಬೆಳವಣಿಗೆಗೆ ಸರ್ಕಾರ ಯೋಜನೆ ರೂಪಿಸಬೇಕು. ರಾಜ್ಯದ ಎಲ್ಲಾ ಭಾಗಗಳಲ್ಲಿ ಸಹಕಾರ ತತ್ವದ ಸೂಪರ್ ಮಾರ್ಕೆಟ್ಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.