‘ಶಾಲಾ ಪಠ್ಯ–ಪುಸ್ತಕ ಇನ್ನೂ ಹೊರಗೆ ಬಂದಿಲ್ಲ. ಅದಾಗಲೇ ಭಗತ್ ಸಿಂಗ್, ನಾರಾಯಣ ಗುರು ಅವರ ಪಠ್ಯ ಕೈ ಬಿಡಲಾಗಿದೆ ಎಂದು ಹೇಳುತ್ತಿದ್ದಾರೆ. ಮೊದಲು ಪುಸ್ತಕ ನೋಡಿ ಎಂದು ಪಠ್ಯಪುಸ್ತಕ ರಚನಾ ಸಮಿತಿ ಅವರಿಗೆ ಆಹ್ವಾನ ನೀಡಿದೆ. ಅದನ್ನು ನೋಡದೆ ವಿವಾದ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಏನೇ ಮಾಡಿದರೂ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ವಿಚಾರಗಳಿದ್ದರೆ ಸ್ವೀಕರಿಸುವ ಮನೋಭಾವ ಇರಬೇಕು. ತಾವು ಕೈ ಬಿಟ್ಟಿರುವ ಪಠ್ಯದ ವಿಷಯವನ್ನು ಸಹ ಸರ್ಕಾರದ ಮೇಲೆ ಹಾಕುತ್ತಿರುವುದು ದುರ್ದೈವ’ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.