ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಚೇರಿಗೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿರುವುದು ಖಂಡನೀಯ. ಅಕ್ರಮ ಹಣ ವರ್ಗಾವಣೆ ಜಾಡು ಪತ್ತೆ ತನಿಖಾ ಕಾರ್ಯದಲ್ಲಿ ಜಾರಿ ನಿರ್ದೇಶನಾಲಯ ತೊಡಗಿದೆ. ತನಿಖೆ ಮಾಡಬಾರದು ಎಂದು ಹೇಳಲು ಪಿಎಫ್ಐಗೆ ಏನು ಅಧಿಕಾರ ಇದೆ’ ಎಂದು ಪ್ರಶ್ನಿಸಿದರು.