ಮೈಸೂರು: ‘ಮುರುಘಾ ಶರಣರ ಪ್ರಕರಣದಿಂದ ಹಿಂದೆ ಸರಿಯಲು ₹ 3 ಕೋಟಿ ಆಮಿಷ ಕುರಿತ ನನ್ನಹೇಳಿಕೆಗೆಸಾಕ್ಷ್ಯಧಾರ ನೀಡಲು ಇದೇ 29ರಂದು ಚಿತ್ರದುರ್ಗಕ್ಕೆ ಬರುವಂತೆ ತಿಳಿಸಲಾಗಿದ್ದು, ಬೆನ್ನುನೋವಿನ ಕಾರಣ ದೂರ ಪ್ರಯಾಣ ಮಾಡಲು ಆಗಿಲ್ಲ. ಹೀಗಾಗಿ, ಗೂಗಲ್ ಮೀಟ್ ಅಥವಾ ವಾಟ್ಸ್ಆ್ಯಪ್ ಮೂಲಕ ಹೇಳಿಕೆ ಪರಿಗಣಿಸಬೇಕು’ ಎಂದುಒಡನಾಡಿಸಂಸ್ಥೆ ನಿರ್ದೇಶಕ ಎಂ.ಎಲ್.ಪರಶುರಾಮ್ ಅವರು ಚಿತ್ರದುರ್ಗ ಪೊಲೀಸರಿಗೆಮಂಗಳವಾರ ಪತ್ರಬರೆದಿದ್ದಾರೆ.