’ನಾರಾಯಣ ನೇತ್ರಾಲಯದಲ್ಲಿ ಪ್ರತಿ ದಿನ ಸರಾಸರಿ 1500 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಶೇಕಡ 60ರಿಂದ 70ರಷ್ಟು ರೋಗಿಗಳು ಮಧುಮೇಹದಿಂದ ಬಳಲುತ್ತಿರುವುದು ಕಂಡು ಬಂದಿದೆ. ಮಧುಮೇಹದಿಂದ ಜೀವನದಲ್ಲಿ ಅಪಾರ ನೋವು ಸಹ ಅನುಭವಿಸುತ್ತಿದ್ದಾರೆ. ರೋಗಿಗಳಲ್ಲಿನ ಅಂಧತ್ವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಿವರ್ಸಿಂಗ್ ಡಯಾಬಿಟಿಸ್ ಚಿಕಿತ್ಸೆ ವಿಧಾನ ಕಂಡು ಹಿಡಿಯಲಾಯಿತು. ಈ ಮೂಲಕ ಮಧುಮೇಹ ಕಣ್ಣಿನ ಕಾಯಿಲೆಯಿಂದ ಲಕ್ಷಾಂತರ ಜನರನ್ನು ಉಳಿಸುವ ಪ್ರಯತ್ನ ಕೈಗೊಳ್ಳಲಾಗಿದೆ’ ಎಂದು ಭುಜಂಗ್ ಶೆಟ್ಟಿ ವಿವರಿಸಿದರು.