ಈ ನಿಗಮ ಸ್ಥಾಪನೆಯ ಹಿಂದೆ ಬೇರೆಯದೇ ಉದ್ದೇಶವಿದ್ದು, ಒಂದು ವೇಳೆ ಯಡಿಯೂರಪ್ಪ ನಾಯಕತ್ವ ಸಂಕಷ್ಟಕ್ಕೆ ಸಿಲುಕಿದರೆ ಸಮುದಾಯ ತಮ್ಮ ನೆರವಿಗೆ ನಿಲ್ಲುವಂತೆ ನೋಡಿಕೊಳ್ಳಬೇಕೆಂಬ ದೂರಗಾಮಿ ಆಲೋಚನೆಯೂ ಇದ್ದಂತಿದೆ. ನಿಗಮ ಸ್ಥಾಪಿಸುವುದಾಗಿ ಏಕಾಏಕಿ ಘೋಷಿಸುವ ಜತೆಗೆ, ಆದೇಶ ಹೊರಡಿಸುವ ತರಾತುರಿಯ ಹಿಂದೆ ರಾಜಕೀಯ ಲೆಕ್ಕಾಚಾರ ಕೆಲಸ ಮಾಡಿದೆ ಎಂದೂ ಹೇಳಲಾಗುತ್ತಿದೆ.