50 ವರ್ಷದ ಜಯರಾಮ್ ಮಂಜಿತ್ತಾಯ ಅವರು, ಕೇಶವಾನಂದ ಭಾರತಿ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರಿ ಸಾವಿತ್ರಿ ಮತ್ತು ನಾರಾಯಣ ಕೆದಿಲಾಯ ದಂಪತಿಯ ಪುತ್ರರು. ಕೇಶವಾನಂದ ಭಾರತಿ ಅವರ ತಾಯಿ, ಎಳೆಯ ವಯಸ್ಸಿನಲ್ಲಿಯೇ ಜಯರಾಮ್ ಅವರನ್ನು ದತ್ತು ತೆಗೆದುಕೊಂಡು, ಮಂಜಿತ್ತಾಯ ಕುಟುಂಬಕ್ಕೆ ಸೇರಿಸಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿರುವ ಜಯರಾಮ್ ಅವರು, ಒಂದು ದಶಕದಿಂದ ಎಡನೀರು ಮಠದ ಆಡಳಿತಾಧಿಕಾರಿಯಾಗಿ ಸಂಪೂರ್ಣ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿದ್ದರು.