‘ಮರಳು ತೆಗೆಯಲು ಅನುಮತಿ ನೀಡುವುದರಿಂದ ಪರಿಸರದ ಮೇಲೆ ಆಗುವ ಹಾನಿ ಮತ್ತು ಗ್ರಾಮಸ್ಥರ ಸಾಂಪ್ರದಾಯಿಕ ಉದ್ಯೋಗದ ಮೇಲೆ ಬೀರುವ ಪರಿಣಾಮದ ಬಗ್ಗೆ ತಜ್ಞ ಸಂಸ್ಥೆಯಿಂದ ಅಧ್ಯಯನ ನಡೆಸಲು ಸರ್ಕಾರ ತಯಾರಿದೆಯೇ ಎಂಬುದು ಪ್ರಶ್ನೆ. ಅಧ್ಯಯನ ನಡೆಸಲು ಸಿದ್ಧವಿರುವ ಬಗ್ಗೆ ಮತ್ತು ಆ ಅಧ್ಯಯನ ಪೂರ್ಣಗೊಳ್ಳುವ ತನಕ ಪರವಾನಗಿ ನೀಡದಿರುವ ಬಗ್ಗೆ ಸರ್ಕಾರ ಹೇಳಿಕೆ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮಾ.12ಕ್ಕೆ ನಿಗದಿ ಮಾಡಿತು.