ಬಾದಾಮಿಯಲ್ಲಿ ಶುಕ್ರವಾರ ನೂತನ ವಿದ್ಯುತ್ ಉಪಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ 30,098 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಆದರೆ ನಮ್ಮ ಬೇಡಿಕೆ ಕೇವಲ 11 ಸಾವಿರ ಮೆಗಾವ್ಯಾಟ್ ಆಸುಪಾಸಿನಲ್ಲಿದೆ. ಬೇಡಿಕೆಗಿಂತ ಹೆಚ್ಚು ಉತ್ಪಾದನೆ ಇರುವ ಕಾರಣ ರಾಯಚೂರು ಶಾಖೋತ್ಪನ್ನ ಘಟಕ ಸ್ಥಗಿತಗೊಳಿಸಿದ್ದೇವೆ. ನಾವೇ ಬೇರೆಯವರಿಗೆ ವಿದ್ಯುತ್ ಕೊಡುವಷ್ಟು ಸಶಕ್ತರಾಗಿರುವ ಕಾರಣ ಕೇಂದ್ರದಿಂದ ಇಲ್ಲವೇ ಹೊರಗಿನವರಿಂದ ವಿದ್ಯುತ್ ಖರೀದಿ ಸಲ್ಲ ಎಂದು ಹೇಳಿದರು.