‘ಕಳೆದ ವರ್ಷ ಪ್ರವಾಹದಿಂದ 2.24 ಲಕ್ಷ ಮನೆಗಳಿಗೆ ಹಾನಿಯಾಗಿತ್ತು. 1.24 ಲಕ್ಷ ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿದೆ. ಉಳಿದ ಮನೆಗಳಿಗೆ ಪರಿಹಾರ ಕೊಡಲು ಹೇಗೆ ಸಾಧ್ಯ? ಕಳೆದ ವರ್ಷ ಪ್ರವಾಹ ಪರಿಹಾರಕ್ಕೆ ₹ 35,000 ಕೋಟಿ ಕೇಳಲಾಗಿತ್ತು. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ₹ 1,654 ಕೋಟಿ. ಈ ವರ್ಷ ಇದುವರೆಗೆ ₹ 4,000 ಕೋಟಿ ಮಾತ್ರ ಪರಿಹಾರ ಕೇಳಲಾಗಿದೆ. ಕೇಂದ್ರದಿಂದ ಪರಿಹಾರ ಕೇಳುವುದಕ್ಕೂ ಭಯವಾ?’ ಎಂದು ಆಗ್ರಹಿಸಿದ್ದಾರೆ.