ಹನೂರು ಶಾಸಕ ಆರ್.ನರೇಂದ್ರ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿರುವ ಮುಜರಾಯಿ ಸಚಿವ
ಕೋಟ ಶ್ರೀನಿವಾಸ ಪೂಜಾರಿ, 'ಆಗಮ ಪಂಡಿತರ ಸಲಹೆ ಮೇರೆಗೆ ಅ.20ರಂದು ದೇಗುಲವನ್ನು ತೆರೆಯಲು ದಿನಾಂಕ ನಿಶ್ಚಯವಾಗಿದೆ. ವಿಧಿ-ವಿಧಾನಗಳೊಂದಿಗೆ ಪ್ರಾಯಶ್ಚಿತ್ತ ಪೂಜೆ, ಹೋಮ, ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು' ಎಂದು ಹೇಳಿದ್ದಾರೆ.